ಗೋಕಾಕ:ಮುಖ್ಯೋಪಾಧ್ಯಾಯ ನಿಂದ ಅಮಾನವೀಯ ಕೃತ್ಯ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪಾಲಕರಿಂದ ಪ್ರತಿಭಟನೆ
ಮುಖ್ಯೋಪಾಧ್ಯಾಯ ನಿಂದ ಅಮಾನವೀಯ ಕೃತ್ಯ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪಾಲಕರಿಂದ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 30 :
ವಿದ್ಯಾರ್ಥಿಗಳಿಗೆ ಅಮಾನವೀಯವಾಗಿ ಥಳಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಶರ್ಫಡ ಮಿಶನ್ ಶಾಲೆಗೆ ಪಾಲಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ
ಗುರುವಾರದಂದು ಭಾಗ್ಯ ನಗರದಲಿರುವ ಶರ್ಫಡ ಮಿಶನ್ ಶಾಲೆಗೆ ಮುತ್ತಿಗೆ ಹಾಕಿದ ಪಾಲಕರು ಮುಖ್ಯೋಪಾಧ್ಯಾಯ ಸಂದಿಪ ಅನಿಗೋಳ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಿಕ್ಷಣಾಧಿಕಾರಿ , ಸಿಡಿಪಿಓ ಮತ್ತು ಪೊಲೀಸ ಇಲಾಖೆಯ ಸಿಬ್ಬಂದಿಗಳು ಪಾಲಕರ ಮನವೊಲಿಸಲು ಹರಸಾಹಸ ಪಟ್ಟರು ನಂತರ ವಿದ್ಯಾರ್ಥಿಗಳು ತಮಗೆ ಏಟು ನೀಡಿದ್ದಲದೆ ನಾವೇ ಗಲಾಟೆ ಮಾಡಿದ್ದೇವೆ ಅದಕ್ಕಾಗಿ ಶಿಕ್ಷಕರು ನಮಗೆ ಶಿಕ್ಷಿಸಿದ್ದಾರೆ ಎಂದು ಮುಚ್ಚಳಿಕೆ ರೂಪದ ಪತ್ರ ಬರೆಯಿಸಿಕೊಂಡದ್ದರ ಬಗ್ಗೆ ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ಹೇಳಿದಾಗ ಪಾಲಕರು ಮತ್ತಷ್ಟು ಕೊಪ್ಪಿತರಾಗಿ ಮುಖ್ಯೋಪಾಧ್ಯಾಯನ ದುರುದ್ದೇಶ ಯಾವ ರೀತಿಯಿಂದ ಕೂಡಿದೆ ಎಂದು ತೀವ್ರವಾಗಿ ಖಂಡಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಮುಖ್ಯೋಪಾಧ್ಯಾಯನನ್ನು ತರಾಠೆಗೆ ತಗೆದುಕೊಂಡರು.
ಪೊಲೀಸರು , ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಕಾಂಬ್ಳೆ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆಯನ್ನು ನಡೆಯಿಸಿ ಮುಖ್ಯೋಪಾಧ್ಯಾಯ,ವಿದ್ಯಾರ್ಥಿ ಮತ್ತು ಪಾಲಕರ ಲಿಖಿತ ಹೇಳಿಕೆಗಳನ್ನು ಪಡೆದು ತಪ್ಪಸ್ಥ ಮುಖ್ಯೋಪಾಧ್ಯಾಯನ ಮೇಲೆ ಕಾನೂನು ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದಾರೆ.
” ಈ ಘಟನೆ ಬಗ್ಗೆ ಕುಲಂಕುಷವಾಗಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕಃಡು ಬಂದಿದ್ದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಾಗೂ ಉಪನಿರ್ದೇಶಕರ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಲಾಗುವದು”.
ಅನಿಲಕುಮಾರ ಕಾಂಬ್ಳೆ .ಶಿಶು ಅಭಿವೃದ್ಧಿ ಅಧಿಕಾರಿ
” ಈ ಪ್ರಕರಣ ಕುರಿತು ಪಾಲಕರ ಹಾಗೂ ವಿದ್ಯಾರ್ಥಿಗಳ ಹೇಳಿಕೆಯನ್ನು ಪಡೆಯಲಾಗಿದ್ದು , ಶೀಘ್ರದಲ್ಲಿ ಕಾರಣ ಕೇಳಿ ಸೋಟಿಸನ್ನು ಆಡಳಿತ ಮಂಡಳಿಗೆ ಜಾರಿ ಮಾಡಿ ಅವರು ನೀಡಿದ ವರದಿ ಆಧರಿಸಿ ಕಾನೂನು ಕ್ರಮ ಕೈಗೋಳಲಾಗುವದು”.
ಜಿ.ಬಿ.ಬಳಗಾರ ಶಿಕ್ಷಣಾಧಿಕಾರಿ
” ಮುಖ್ಯೋಪಾಧ್ಯಾಯನ ಅಮಾನವೀಯ ವರ್ತನೆ ಖಂಡನೀಯವಾಗಿದ್ದು,ಈ ಕುರಿತು ಶಿಕ್ಷಣಾಧಿಕಾರಿಗಳಿಗೆ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮುಖ್ಯೋಪಾಧ್ಯಾಯನ ಮೇಲೆ ಕಾನೂನು ಕ್ರಮ ಕೈಗೋಳುವಂತೆ ಒತ್ತಾಯಿಸಲಾಗಿದೆ”.
ಬಸವರಾಜ ಖಾನಪ್ಪನವರ ಕರವೇ ಅಧ್ಯಕ್ಷರು ಗೋಕಾಕ