RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಪರಿಸರವನ್ನು ಸಂರಕ್ಷಣೆ ಮಾಡಿದರೆ ಪರಿಸರವು ನಮ್ಮ ಸಂರಕ್ಷಣೆ ಮಾಡುತ್ತದೆ : ಮುರಘರಾಜೇಂದ್ರ ಶ್ರೀ

ಗೋಕಾಕ:ಪರಿಸರವನ್ನು ಸಂರಕ್ಷಣೆ ಮಾಡಿದರೆ ಪರಿಸರವು ನಮ್ಮ ಸಂರಕ್ಷಣೆ ಮಾಡುತ್ತದೆ : ಮುರಘರಾಜೇಂದ್ರ ಶ್ರೀ 

ಪರಿಸರವನ್ನು ಸಂರಕ್ಷಣೆ ಮಾಡಿದರೆ ಪರಿಸರವು ನಮ್ಮ ಸಂರಕ್ಷಣೆ ಮಾಡುತ್ತದೆ : ಮುರಘರಾಜೇಂದ್ರ ಶ್ರೀ

ಗೋಕಾಕ : ಪರಿಸರವನ್ನು ಸಂರಕ್ಷಣೆ ಮಾಡಿದರೆ ಪರಿಸರವು ನಮ್ಮ ಸಂರಕ್ಷಣೆ ಮಾಡುತ್ತದೆ ಎಂದು ಗೋಕಾಕ ಶೂನ್ಯ ಸಂಪಾದನ ಮಠದ ಮ.ನಿ.ಪ್ರ. ಶ್ರೀ ಮುರಘರಾಜೇಂದ್ರ ಸ್ವಾಮಿಗಳು ಹೇಳಿದರು.

ಅವರು ಮಂಗಳವಾರದಂದು ಖನಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಆಶ್ರಯದಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ. ಒಂದೇ ದಿನ 25 ಸಾವಿರ ಸಸಿ ನೆಡುವ ಕಾರ್ಯಕ್ರಮದ ಪ್ರಚಾರಾರ್ಥ ಏರ್ಪಡಿಸಿದ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಬುದ್ದಿಜೀವಿ ಎಂದು ಕರೆಯಿಸಿಕೊಳ್ಳುವ ಮನುಕುಲ ಇಂದು ಪರಿಸರ ಸಂರಕ್ಷಿಸುವುದರ ಕಡೆ ಗಮನಹರಿಸದಿಲ್ಲದಿರುವುದು ನಮ್ಮ ನಾಡಿನ ದೌಭಾಗ್ರ್ಯ. ಇದರಿಂದ ರಾಜ್ಯಾದ್ಯಂತ ಇಂದು ನಾವೆಲ್ಲ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಮಳೆ, ಬೆಳೆ ಇಲ್ಲದೆ ಜನರು ಕಂಗಾಲಾಗುತ್ತಿದ್ದಾರೆ. ಇದನ್ನೆಲ್ಲ ಅರಿತು ನಾವು ಸುಮ್ಮನೆ ಕುಳಿತುಕೊಳ್ಳದೆ ಸ್ವಯಂ ಪ್ರೇರಿತವಾಗಿ ಪರಿಸರ ಸಂರಕ್ಷಣೆಗಾಗಿ ಮುಂದಾಗಬೇಕಾಗಿದೆ. ಆ ದಿಶೆಯಲ್ಲಿ ಬರುವ ಅಗಷ್ಟ್ 13 ರಂದು ಹಸಿರುಗೋಕಾಕಗಾಗಿ ಒಂದು ದಿನ ಎಂಬ ಶೀರ್ಷಿಕೆಯಡೆಯಲ್ಲಿ ತಾಲೂಕಿನಾಧ್ಯಂತ ಒಂದು ದಿನ ಸುಮಾರು 25 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಖನಗಾಂವಿ ಪಂಚಾಯತಿ ವ್ಯಾಪ್ತಿಯಲ್ಲಿಯೂ ಸುಮಾರು 2000 ಸಾವಿರ ಸಸಿ ನೆಡುವ ಉದ್ದೇಶ ಹೊಂದಲಾಗಿದೆ. ಆದ್ದರಿಂದ ಈ ಭಾಗದ ಎಲ್ಲ ಜನಪ್ರತಿನಿಧಿಗಳ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅರಣ್ಯ ಇಲಾಖೆಯ ಸಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 13 ರಂದು ಸರಿಯಾಗಿ ಬೆಳಿಗ್ಗೆ 11-00 ಗಂಟೆಗೆ ಖನಗಾಂವ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 2000 ಸಸಿಗಳನ್ನು ನೆಟ್ಟು ಅವುಗಳನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.

ಸಭೆಗೂ ಮುನ್ನ ಶಾಲಾ ಆವರಣದಲ್ಲಿ ಶ್ರೀಗಳು ಸಾಂಕೇತಿಕವಾಗಿ ಒಂದು ಸಸಿ ನೆಡುವುದರ ಮುಖಾಂತರ ಪ್ರಚಾರಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ರ.ವೇ ತಾಲೂಕಾಧ್ಯಕ್ಷರಾದ ಬಸವರಾಜ ಖಾನಪ್ಪನವರ ವಹಿಸಿ ಮಾತನಾಡಿದರು.

ವೇದಿಕೆ ಮೇಲೆ ಅರಣ್ಯ ಅಧಿಕಾರಿಗಳಾದ ಎಸ್.ಜಿ. ಸಿಂಪಿ, ಕವನ ನಂದಿ, ಎಸ್.ಪಿ. ಕಳ್ಳಿಗುದ್ದಿ, ಜಿ.ಎಸ್. ತಾಂವಶಿ, ಶಿಕ್ಷಣ ಇಲಾಖೆಯ ಸಿ.ಆರ್.ಪಿ ಗಳಾದ ಪಾಟೀಲ, ಜಿ.ಎಸ್. ಕಲ್ಲೋಳಿ, ಕ.ರ.ವೇ ಸಾಧಿಕ ಹಲ್ಯಾಳ, ಶಿಕ್ಷಕರಾದ ಬಿ.ಎಂ. ತಹಶೀಲ್ದಾರ ಗ್ರಾಮದ ಹಿರಿಯರಾದ ಸಿದ್ರಾಮಯ್ಯ ಹಿರೇಮಠ, ಜಗದೀಶ ವಣ್ಣೂರ, ಕ.ರ.ವೇ ಪದಾಧಿಕಾರಿಗಳಾದ ಕೃಷ್ಣಾ ಖಾನಪ್ಪನವರ, ಹನೀಫಸಾಬ ಸನದಿ, ಮುತ್ತೆಪ್ಪ ಘೋಡಗೇರಿ, ಮುಗಟ ಪೈಲವಾನ, ಪ್ರತೀಕ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಕಾರ್ಯಕ್ರವನ್ನು ಶಿಕ್ಷಕ ಬಿ.ಎನ್. ಬಶೆಟ್ಟಿ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದ ಪ್ರಚಾರಾರ್ಥವಾಗಿ ತಾಲೂಕಿನ ಕೊಳವಿ, ಮಿಡಕನಹಟ್ಟಿ, ಮದವಾಲ ಹಾಗೂ ತವಗ ಗ್ರಾಮಗಳಲ್ಲಿ ಪ್ರಚಾರಾರ್ಥ ಸಭೆಗಳನ್ನು ಆಯೋಜಿಸಿ ಅಗಸ್ಟ 13 ರಂದು ಕಾರ್ಯಕ್ರಮದಲ್ಲಿ ಎಲ್ಲ ಗ್ರಾಮಸ್ಥರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.

ಪ್ರಚಾರಾರ್ಥಗಳ ಜರುಗಿದ ಸಭೆಗಳಲ್ಲಿ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಜಿ.ಎಸ್. ಸನದಿ, ಬಿ.ವ್ಹಿ. ಶಿರಗಾಂವಕರ, ಎಂ.ಬಿ. ಹೆಬ್ಬಾಳ, ವಾಚರ ಸರ್ಫರಾಜ ಜಕಾತಿ ಸೇರಿದಂತೆ ಗ್ರಾಮದ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲಾಗುವುದೆಂದು ಭರವಸೆ ನಿಡಿದರು

Related posts: