ಗೋಕಾಕ:ವ್ಯಾಕರಣದ ಜ್ಞಾನವಿಲ್ಲದೆ ಹಳಗನ್ನಡ ಕಾವ್ಯಗಳ ಅಧ್ಯಯನ ಪೂರ್ಣವಾಗದು : ಜಿ.ವಿ.ಮಳಗಿ
ವ್ಯಾಕರಣದ ಜ್ಞಾನವಿಲ್ಲದೆ ಹಳಗನ್ನಡ ಕಾವ್ಯಗಳ ಅಧ್ಯಯನ ಪೂರ್ಣವಾಗದು : ಜಿ.ವಿ.ಮಳಗಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :
ಯಾವುದೇ ಭಾಷೆಯಿರಲಿ ಅದರಲ್ಲಿ ವ್ಯವಹರಿಸಬೇಕಾದಾಗ ಆಯಾ ಭಾಷೆಯ ವ್ಯಾಕರಣವೇ ಪ್ರಧಾನವಾಗಿದೆ ಎಂದು ಜ್ಞಾನದೀಪ ಕಾಲೇಜಿನ ಪ್ರೋ: ಜಿ.ವಿ.ಮಳಗಿ ಹೇಳಿದರು.
ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಮಾರ್ಡನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವ್ಯಾಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಾಕರಣದ ಜ್ಞಾನವಿಲ್ಲದೆ ಹಳಗನ್ನಡ ಕಾವ್ಯಗಳ ಅಧ್ಯಯನ ಪೂರ್ಣವಾಗದು.ಕಾವ್ಯಗಳಲ್ಲಿರುವ ಅಲಂಕಾರ, ಛಂದಸ್ಸು ವ್ಯಾಕರಣದ ಅಂಶಗಳನ್ನು ಅರಿತಾಗ ಕಾವ್ಯವನ್ನು ಅರ್ಥೈಸಿಕೊಳ್ಳಬಹುದು ಎಂದರು.
ಎಂ.ಬಿ.ಕುದರಿ, ಜಯಶ್ರೀ ಕರಿಗಾರ, ಹತಪಾಕಿ, ಕದಮ್, ಭಾಷೆಗಳ ಮಹತ್ವ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲೆಯ ಪ್ರಧಾನ ಶಿಕ್ಷಕಿ ಡಾ: ಎಂ.ಎನ್.ಹುದ್ದಾರ ವಹಿಸಿದ್ದರು.
ಕಾರ್ಯಕ್ರಮವನ್ನು ವಂದನಾ ಸ್ವಾಗತಿಸಿದರು. ಭಾರತಿ ವಾಲಿ, ನಿರೂಪಿಸಿದರು. ಎಂ.ಎಂ.ಸೊಗಲದ ವಂದಿಸಿದರು.