ಘಟಪ್ರಭಾ:ಘಟಪ್ರಬಾದಿಂದ ಚಿಕ್ಕೋಡಿಯ ವರೆಗೆ ಪೂರ್ಣಗೊಂಡ ಜೋಡು ಹಳಿ ರಸ್ತೆ ಕಾಮಗಾರಿಯನ್ನು ಲೋಕಾರ್ಪಣೆ

ಘಟಪ್ರಬಾದಿಂದ ಚಿಕ್ಕೋಡಿಯ ವರೆಗೆ ಪೂರ್ಣಗೊಂಡ ಜೋಡು ಹಳಿ ರಸ್ತೆ ಕಾಮಗಾರಿಯನ್ನು ಲೋಕಾರ್ಪಣೆ
ನಮ್ಮ ಬೆಳಗಾವಿ ಇ –ವಾರ್ತೆ , ಘಟಪ್ರಭಾ ಡಿ 18 :
ಘಟಪ್ರಬಾದಿಂದ ಚಿಕ್ಕೋಡಿಯ ವರೆಗೆ ಪೂರ್ಣಗೊಂಡ ಜೋಡು ಹಳಿ ರಸ್ತೆ ಕಾಮಗಾರಿಯನ್ನು ಲೋಕಾರ್ಪಣೆ ಮಾಡಿದರು. ಇತ್ತೀಚಿಗೆ ಜರುಗಿದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ಸರ್ಕಾರವನ್ನು ಸುಭದ್ರ ಮಾಡಿದ ತಮ್ಮೆಲ್ಲರಿಗೂ ದನ್ಯವಾದಗಳು ಎಂದು ರಾಜ್ಯ ರೇಲ್ವೆ ಸಚಿವರಾದ ಸುರೇಶ ಅಂಗಡಿ ನುಡಿದರು.
ಅವರು ಬುಧವಾರದಂದು ಘಟಪ್ರಭಾ ರೇಲ್ವೆ ನಿಲ್ದಾಣದ ಹೊರಗಡೆ ಆಯೋಜಿಲಾಗಿದ್ದ ಘಟಪ್ರಭಾದಿಂದ ಚಿಕ್ಕೋಡಿ ವರೆಗಿನ ಜೋಡು ಹಳಿ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದ ವೇದಿಕೆಯನ್ನದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂಧರ್ಭದಲ್ಲಿ ಬೆಳಗಾವಿ ದಾರವಾಡ ನಡುವಿನ ಸಮೀಪದ ರೈಲು ಕಾಮಗಾರಿಯ ಕಾರ್ಯ ಹಾಗೂ ಇನ್ನೂ ಅನೇಕ ಕಾಮಗಾರಿಗಳಿಗೆ ಅನುಮತಿ ಪಡೆದು ಆದಷ್ಟು ಬೇಗನೆ ಕಾಮಗಾರಿ ಕೈ ಕೊಳ್ಳುವದಾಗಿ ಭರವಸೆ ನೀಡಿದರು. ಘಟಪ್ರಭಾದಿಂದ ಹೊರ ರಾಜ್ಯಗಳಿಗೆ ಹೋಗುವ ತರಕಾರಿಯನ್ನು ಖಾಸಗಿಯಾಗಿ ಶೀತಲಿಕರಣ ಮಾಡುವÀ ವ್ಯವಸ್ಥೆ ಮಾಡುವದಾಗಿ ತಿಳಿಸಿದರು.
ರಾಜ್ಯ ಸಭಾ ಸದಸ್ಯರು, ಕೆಎಲ್ ಇ ಸಂಸ್ಥೆಯ ಚೇರಮನ್ನರು ಆದ ಪ್ರಭಾಕರ ಕೋರೆ ಮಾತನಾಡಿ ಸ್ವಾತ್ಯಂತ್ರ ಸಿಕ್ಕ ನಂತರ ರೇಲ್ವೆ ಇಲಾಖೆಗೆ 11 ಜನ ಮಂತ್ರಿಗಳಾದರು. ಆದರೆ ಇಷ್ಟು ಉತ್ತಮ ತ್ವರಿತಗತಿ ಕಾರ್ಯವನ್ನು ಯಾರೂ ಮಾಡಿಲ್ಲ ಆದರೆ ಸುರೇಶ ಅಂಗಡಿಯವರು ಈ ಕಾರ್ಯ ಮಾಡಿ ತೋರಿಸಿದ್ದಾರೆ. ಬೆಳಗಾವಿ ಸಕ್ಕರೆ ಜಿಲ್ಲೆ ಇಲ್ಲಿ ಅನೇಕ ಸಕ್ಕರೆ ಕಾರಖಾನೆಗಳು ಇದ್ದು ಸಕ್ಕರೆ ಸಾಗಿಸಲು ಗೋದಾಮುಗಳ ವ್ಯವಸ್ಥೆ ಅಗಬೇಕಾಗಿದೆ ಎಂದರು.
ರಾಯಬಾಗದ ಶಾಸಕರಾದ ದುರ್ಯೋದನ ಐಹೋಳೆ ಮಾತನಾಡಿ ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಬಿಡುವ ಬೆಂಗಳೂರ ಟ್ರೇನ್ನ್ನು ಮಿರಜ ವರೆಗೆ ಓಡಿಸಿದರೆ, ಬೆಳಗಾವ ಜೊತೆಗೆ ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕಿನ ಜನರಿಗೂ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹುಬ್ಬಳ್ಳಿ ವಿಭಾಗದ ರೇಲ್ವೆ ಅಧಿಕಾರಿ ಎ.ಕೆ.ಸಿಂಗ, ಚಿಕ್ಕೋಡಿ ಸಂಸದರಾದ ಅಣ್ಣಸಾಹೇಬ ಜೋಲ್ಲೆ, ಎಮ್.ಎಲ್.ಸಿ. ಕವಟಗಿಮಠ, ಜಿಲ್ಲಾ ಪರಬಾರಿ ಈರಣ್ಣಾ ಕಡಾಡಿ, ಗ್ರಾಮೀಣ ಅಧ್ಯಕ್ಷರಾದ ವಿರುಪಾಕ್ಷಿ ಯಲಿಗಾರ, ರೇಲ್ವೆ ಸಲಹಾ ಸಮೀತಿ ಸದಸ್ಯರಾದ ಸುರೇಶ ಪಾಟೀಲ, ಪ್ರಮೋದ ಜೋಶಿ, ಗುರುಪಾದ ಕಳ್ಳಿ, ಪ್ರೇಮಾ ಭಂಡಾರಿ,ಸ್ವಾತ್ಯಂತ್ರಯೋದ ಕರಲಿಂಗನವರ. ಸೇರಿದಂತೆ ಅನೇಕರು ಇದ್ದರು.