ಘಟಪ್ರಭಾ:ನಕಲಿ ದಾಖಲೆ ಸೃಷ್ಠಿ, ಐದು ಜನರ ವಿರುದ್ಧ 420 ಕೇಸ : ಘಟಪ್ರಭಾ ಠಾಣೆಯಲ್ಲಿ ಘಟನೆ

ನಕಲಿ ದಾಖಲೆ ಸೃಷ್ಠಿ, ಐದು ಜನರ ವಿರುದ್ಧ 420 ಕೇಸ : ಘಟಪ್ರಭಾ ಠಾಣೆಯಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 28 :
11 ವರ್ಷ ಹಿಂದೆ ಮೃತನಾದ ವ್ಯಕ್ತಿಯನ್ನು ಜೀವಂತ ಇದ್ದಾನೆಂದು ನಕಲಿ ದಾಖಲೆ ಸೃಷ್ಠಿಸಿ, ಆ ಹೆಸರಿನಲ್ಲಿ ಬೇರೆ ವ್ಯಕ್ತಿಯನ್ನು ನಿಲ್ಲಿಸಿ ಆಸ್ತಿಯನ್ನು ಪರಭಾರೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಜರುಗಿದ್ದು, ಈ ಕುರಿತು ರವಿವಾರ ಘಟಪ್ರಭಾ ಪೊಲೀಸ ಠಾಣೆಯಲ್ಲಿ ಐದು ಜನರ ವಿರುದ್ಧ 420 ಕೇಸ ದಾಖಲಾಗಿದೆ.
ಮಲ್ಲಾಪೂರ ಪಿಜಿ ಪಟ್ಟಣದ ವ್ಯಾಪ್ತಿಗೆ ಬರುವ ಸರ್ವೇ ನಂ.43/1ಕ್ಷೇತ್ರ 11ಎಕರೆ 14 ಗುಂಟೆ ಜಮೀನು ನೀಲಕಂಠ ಗುರುಲಿಂಗ ಕಮತ ಎಂಬ ವ್ಯಕ್ತಿಯ ಹೆಸರಿನಲ್ಲಿತ್ತು. ಆದರೆ ದಿ.10-4-2008 ರಲ್ಲಿ ನೀಲಕಂಠ ನಿಧನವಾಗಿದ್ದರಿಂದ ನಂತರ ಈ ಆಸ್ತಿ ಅವರ ವಾರಸುದಾರರ ಕಬ್ಜೆಯಲ್ಲಿತ್ತು.
ದಿ.ನೀಲಕಂಠ ಕಮತಗೆ ಇಬ್ಬರು ಪತ್ನಿಯರಿದ್ದು ಮೂದಲನೇ ಹೆಂಡತಿಗೆ ಓರ್ವ ಮಗಳು ಸಾತವ್ವ ಕಾಡಪ್ಪ ನಂದಗಾವಿ ಇದ್ದಾಳೆ. ಇನ್ನು ಎರಡನೇಯ ಪತ್ನಿಯ ಮಕ್ಕಳಾದ ಶಂಕರ ನೀ.ಕಮತ, ಸಿದ್ದವ್ವ ಮ ಬಾಗೇವಾಡಿ, ಲಗಮವ್ವ ಕ ಶಿರಗಾವಿ, ಅಪರಾಯಿ ನೀ ಕಮತ, ನಿರ್ಮಲಾ ಸು. ಕಮತ, ಕಿರಣ ಸು ಕಮತ, ಅರುಣ ಸು ಕಮತ, ಶೋಭಾ ರು ಕಮತ, ಬಸವರಾಜ ರು ಕಮತ, ಸುಭಾಸ ರು ಕಮತ ಈ ರೀತಿ 11 ಜನ ವಾರಸದಾರರಿದ್ದಾರೆ.
ವಾರಸುದಾರರು ಇದ್ದರೂ ಸಹ ಆಸ್ತಿ ಹೊಡೆಯುವ ದುರುದ್ದೇಶದಿಂದ ಎರಡನೇಯ ಪತ್ನಿಯ ಮಕ್ಕಳಲ್ಲಿನ ಮೂವರು ಅಂದರೆ ನಿರ್ಮಲಾ ಸುರೇಶ ಕಮತ ಸೊಸೆ ಹಾಗೂ ಮೊಕ್ಕಳಾದ ಮಲ್ಲಿಕಾರ್ಜುನ ಶಂಕರ ಕಮತ, ಕೆಂಪಣ್ಣ ಶಂಕರ ಕಮತ ಸೇರಿಕೊಂಡು 11 ವರ್ಷಗಳ ಹಿಂದೆ ಮೃತನಾದ ನೀಲಕಂಠ ಕಮತ ಅವರ ಬದಲಿಗೆ ಬೇರೆ ವ್ಯಕ್ತಿಯನ್ನು ಸೃಷ್ಠಿಸಿ ಅವರ ಹೆಸರಿನಲ್ಲಿ 2076 5277 0818 ನಂಬರಿನ ನಕಲಿ ಆಧಾರ ಕಾರ್ಡ ತಯಾರಿಸಿ ಗೋಕಾಕ ಸಬ್ ರಜಿಸ್ಠಾರ ಕಛೇರಿಯಲ್ಲಿ ದಿ.30-05-2019 ರಂದು ನಕಲಿ ಬಕ್ಷೀಸ ಪತ್ರ ಬರೆಯಿಸಿಕೊಂಡಿದ್ದಾರೆ.
ಇನ್ನ್ನುಳಿದ ವಾರಸುದಾರರಲ್ಲಿನ ಒಬ್ಬರು ತಮ್ಮ ತಂದೆ ಹೆಸರಿನಲ್ಲಿದ್ದ ಆಸ್ತಿ ಉತಾರ ತೆಗೆಯಿಸಲು ಹೋದಾಗ ಆಸ್ತಿ ಪರಭಾರೆ ವಿಷಯ ಬಯಲಾಗಿದೆ. ಕೂಡಲೆ ಎಚ್ಚೆತ್ತಕೊಂಡ ಇನ್ನುಳಿದ ವಾರಸುದಾರರು ತಮ್ಮ ತಂದೆ ನೀಲಕಂಠ ಗುರುಲಿಂಗ ಕಮತ ಅವರು 2008 ರಲ್ಲಿ ಮೃತರಾಗಿರುವ ಪ್ರಮಾಣ ಪತ್ರ ಮತ್ತು ಗೋಕಾಕ ಸಬ್ ರಜಿಸ್ಠಾರ ಕಛೇರಿಯಲ್ಲಿ ಆರೋಪಿಸಗಳು ಸಲ್ಲಿಸಿರುವ ನಕಲಿ ದಾಖಲಾತಿಗಳ ಸಮೀತ ಘಟಪ್ರಭಾ ಪೋಲಿಸ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ.
ಮಲ್ಲಾಪೂರ ಪಿ.ಜಿ ಪಟ್ಟಣದ ನಿರ್ಮಲಾ ಸುರೇಶ ಕಮತ, ಮಲ್ಲಿಕಾರ್ಜುನ ಶಂಕರ ಕಮತ, ಕೆಂಪಣ್ಣ ಶಂಕರ ಕಮತ ಹಾಗೂ ಆಸ್ತಿ ಪರಭಾರೆಗೆ ಸಾಕ್ಷಿಯಾಗಿ ಸಹಿ ಮಾಡಿರುವ ಪಾಮಲದಿನ್ನಿ ಗ್ರಾಮದ ಕೆ.ಬಿ.ಡಬಾಜ ಹಾಗೂ ಬಿ.ಪಿ.ಅನಜಗಿ ಸೇರಿ ಐದು ಜನರ ವಿರುದ್ಧ 420 ಕಲಮ್ದಡಿ ಪ್ರಕರಣ ದಾಖಲಿಸಿಕೊಂಡಿರುವ ಘಟಪ್ರಭಾ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.