ಗೋಕಾಕ:ನೆರೆ ಬಂದಾಗ ಜನರ ಸಮಸ್ಯೆಗೆ ಸ್ವಂದಿಸಬೇಕಾದವರು ನಾಪತ್ತೆಯಾಗಿದ್ದರು : ಸಹೋದರ ರಮೇಶ ವಿರುದ್ಧ ಲಖನ ವಾಗ್ದಾಳಿ

ನೆರೆ ಬಂದಾಗ ಜನರ ಸಮಸ್ಯೆಗೆ ಸ್ವಂದಿಸಬೇಕಾದವರು ನಾಪತ್ತೆಯಾಗಿದ್ದರು : ಸಹೋದರ ರಮೇಶ ವಿರುದ್ಧ ಲಖನ ವಾಗ್ದಾಳಿ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಅ 18 :
ಗೋಕಾಕ ನಗರಕ್ಕೆ ನೆರೆ ಬಂದಾಗ ಜನರ ಸಮಸ್ಯೆಗೆ ಸ್ವಂದಿಸಬೇಕಾದವರು ನಾಪತ್ತೆಯಾಗಿದ್ದರು ಎಂದು ಯುವ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು
ಶುಕ್ರವಾರದಂದು ನಗರದ ಲಕ್ಕವನ ಗುಡಿಯ ಆವರಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು
ನಿರಾಶ್ರಿತರಿಗೆ ತಾತ್ಕಾಲಿಕ ಪರಿಹಾರವಾದ ಚೆಕ್ ಮುಟ್ಟಿಸುವಲ್ಲಿ ಇಲ್ಲಿನ ನಗರಸಭೆ ಸದಸ್ಯರು ತಾರತಮ್ಯ ತೋರಿದ್ದಾರೆ. ಕಷ್ಟದ ಕಾಲದಲ್ಲಿ ಜನರ ಪರವಾಗಿ ನಿಲ್ಲಬೇಕಿದ ನರಗಸಭೆ ಸದಸ್ಯರು ಏಜೆಂಟರಾಗಿ ಕಾರ್ಯ ಮಾಡಿ ನಿಮ್ಮ ಪರಿಹಾರದಲ್ಲಿಯ ದುಡ್ಡ ಹೊಡೆದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕಾದ ಇಲ್ಲಿಯ ಅರ್ನಹ ಶಾಸಕರು ಅಮರವಾಗಿದ್ದಾರೆ ಎಂದು ಸಹೋದರ ರಮೇಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು .
ಬರುವ ದಿನಗಳಲಿ ಗೋಕಾಕ ನಗರಕ್ಕೆ ಒಳ್ಳೆಯ ದಿನಗಳು ಬರುತ್ತವೆ ಅದಕ್ಕಾಗಿ ಡಿಸೆಂಬರ್ 5 ಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಸತೀಶ ಅವರ ಕೈ ಬಲ ಪಡಿಸಬೇಕು. ಸತೀಶ ಅವರು ಸರಕಾರ ಜೊತೆಗೆ ಹೋರಾಟ ಮಾಡಿ ನ್ಯಾಯ ದೊರಕಿಸುತ್ತಾರೆ ಸತೀಶ ಅವರ ಕಾರ್ಯ ಮುಂಜಾನೆ 6 ಘಂಟೆಯಿಂದ ರಾತ್ರಿ 8 ಘಂಟೆಗೆ ನಿರಂತರ ವಿರುತ್ತಾರೆ ಇಲ್ಲಿನ ಅರ್ನಹ ಶಾಸಕರು ಸಂಜೆ 6 ಆದರೂ ಜನರ ಸಮಸ್ಯೆ ಕೇಳುವದಿಲ್ಲ, ಶಾಸಕರು ಫಲಾಯನವಾದಿಗಳಂತೆ ವರ್ತಿಸಿದ್ದಾರೆ ಎಂದು ವ್ಯಂಗವಾಡಿದರು.
ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕ ಸತೀಶ ಜಾರಕಿಹೊಳಿ ಅವರು ರಾಜಕೀಯ ಬದಲಾವಣೆ ಎಲ್ಲಿಯವರೆಗೆ ಆಗುದಿಲ್ಲ ಅಲ್ಲಿಯವರೆಗೆ ಗೋಕಾಕ ವವ್ಯಸ್ಥೆ ಬದಲಾಗುವದಿಲ್ಲ . ಗೋಕಾಕದಲ್ಲಿ ಸಾರ್ವಜನಿಕರ ಕೆಲಸವಾಗಬೇಕಾದರೆ ನಾಲ್ಕ ಜನರು ಹೇಳಿದರೆ ಮಾತ್ರ ಕೆಲಸ ಇಲ್ಲದಿದ್ದರೆ ಇಲ್ಲ. ಲೋಳಸೂರ ಸೇತುವೆ ಎತ್ತರಿಸಲು ಆಗ್ರಹಿಸಿ ಕಳೆದ ಹತ್ತು ವರ್ಷದ ಹಿಂದೆ ಹೋರಾಟ ಮಾಡಿದ್ದೇವೆ ಆದರೆ ನರಗಸಭೆ ಕೋತಾವಲನ ಸಹಕಾರದಿಂದ ಅಲ್ಲಿ ದೊಡ್ಡ ದೊಡ್ಡ ಅಂಗಡಿಗಳು ಆಗಿವೆ ಆ ಸಮಯದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ಸಿಗಲಿಲ್ಲ , ನಿಮ್ಮ ಸಹಕಾರಕ್ಕೆ ನಿಲ್ಲಬೇಕಾದವರು ನಿಲ್ಲಲಿಲ್ಲ ನಗರಸಭೆಯಲ್ಲಿ ಕಮಿಷನ್ ದಂಧೆ ಜೋರಾಗಿದೆ ಈ ವವ್ಯಸ್ಥೆ ಬದಲಾಗಬೇಕಾದರೆ ಶಾಸಕರ ಬದಲಾವಣೆ ಯಾಗಬೇಕು. ಈ ಬಾರಿ ಲಖನ್ ಜಾರಕಿಹೊಳಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು . ಸರಕಾರದ ಹಲವು ಯೋಜನೆಗಳನ್ನು ತಂದು ಗೋಕಾಕನ್ನು ಮಾದರಿ ಕ್ಷೇತ್ರ ಮಾಡುತ್ತೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ಭಗವಂತ ಹುಳ್ಳಿ , ಮಯಾಪ್ಪ ತಹಶೀಲ್ದಾರ್ ,ಕರೆಪ್ಪ ಬಡೇಪ್ಪಗೋಳ, ಸೈಯದ ಪಶ್ಚಾಪುರೆ ,ಲಕ್ಷ್ಮಣ ಮಲ್ಲಾಪೂರೆ , ಯಲ್ಲಪ್ಪ ಹೆಜ್ಜೆಗಾರ ಸೇರಿದಂತೆ ಇತರರು ಇದ್ದರು .