ಗೋಕಾಕ:ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ದಲಿತ ಸಮಾವೇಶವನ್ನು ಮಾಡುವ ಮೂಲಕ ಶಕ್ತಿ ಪ್ರದರ್ಶನ ನಡೆಸಲು ನಿರ್ಧಾರ

ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ದಲಿತ ಸಮಾವೇಶವನ್ನು ಮಾಡುವ ಮೂಲಕ ಶಕ್ತಿ ಪ್ರದರ್ಶನ ನಡೆಸಲು ನಿರ್ಧಾರ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 27:
ಮಾದಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಂದ್ರ ಐಹೊಳೆ ಅವರ ನೇತ್ರತ್ವದಲ್ಲಿ ತಾಲೂಕಾ ಮಾದಿಗ ಮೀಸಲಾತಿ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳು ಶುಕ್ರವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಕಳೆದ 20 ವರ್ಷಗಳಿಂದ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವಂತೆ ಹಲವಾರು ಬಾರಿ ಹೋರಾಟ ನಡೆಸಿದರು, ಅದನ್ನು ಜಾರಿ ಮಾಡಲು ಮೀನಾಮೇಷವನ್ನು ಎಣಿಸುತ್ತೀರುವ ಸರ್ಕಾರಗಳು ನಮಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿವೆ. ರಾಜಕೀಯ ಪಕ್ಷಗಳು ತಮ್ಮ ವೋಟ ಬ್ಯಾಂಕಾಗಿ ಮಾತ್ರ ದಲಿತರನ್ನು ಉಪಯೋಗಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವರದಿಯನ್ನು ಜಾರಿಗೊಳಿಸುವಂತಹ ಪಕ್ಷಕ್ಕೆ ನಮ್ಮ ಬೆಂಬಲ ಇದ್ದು ದಲಿತರಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಹಾಗೂ ನಗರದಲ್ಲಿ ಬೃಹತ್ ದಲಿತ ಸಮಾವೇಶವನ್ನು ಮಾಡುವ ಮೂಲಕ ಶಕ್ತಿ ಪ್ರದರ್ಶನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಭೆಯಲ್ಲಿ ದಲಿತ ಮುಖಂಡರಾದ ಅಶೋಕ ಉದ್ದಪ್ಪನವರ, ಬಸವರಾಜ ಕಾಡಾಪೂರ, ಸತ್ತೆಪ್ಪ ಕರೇವಾಡಿ, ರಮೇಶ ಮಾದರ, ಲಕ್ಷ್ಮಣ ತೆಳಗಡೆ, ಮನೋಹರ ಅಜ್ಜನಕಟ್ಟಿ, ರಮೇಶ ಸಣ್ಣಕ್ಕಿ, ರಾಮಣ್ಣ ಈಟಿ, ಶಾಂತಪ್ಪ ಹಿರೇಮೇತ್ರಿ, ರಮೇಶ ಹೊಸಮನಿ, ದುರ್ಗೆಶ ಮೇತ್ರಿ, ಬಾಳೇಶ ಸಂತವ್ವಗೋಳ ಸೇರಿದಂತೆ ಅನೇಕರು ಇದ್ದರು.