ಗೋಕಾಕ:ಕೊಳವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

ಕೊಳವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ
ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ಸೆ 25 :
ತಾಲೂಕಿನ ಕೊಳವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಮಂಗಳವಾರದಂದು ಜರುಗಿತು.
ಸಂಘವು ಅ ಶ್ರೇಣಿಯಲ್ಲಿ ಇದ್ದು ಪ್ರಸಕ್ತ ಸಾಲಿನಲ್ಲಿ 9.3 ಲಕ್ಷ ರೂ ಲಾಭದಲ್ಲಿದ್ದು ಸಂಘದ ಸದಸ್ಯರ ಸಹಕಾರವೇ ಇದಕ್ಕೆಲ್ಲ ಕಾರಣ ಕಾರಣ ಸರ್ವ ಸದಸ್ಯರು ಇದೆ ರೀತಿ ತಮ್ಮ ಸಹಕಾರವನ್ನು ಮುಂದುವರೆಸಿ ಕೊಂಡು ಸಂಘದ ಏಳ್ಗೆಗೆಗೆ ಶ್ರಮಿಸಬೇಕೆಂದು ಅಧ್ಯಕ್ಷ ಸಿದ್ದಪ್ಪ ರಂಗನ್ನವರ ತಮ್ಮ ವರದಿ ವಾಚನದಲ್ಲಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಬಸವರಾಜ ಗೌಡಪ್ಪಗೋಳ, ನಿರ್ದೇಶಕರುಗಳಾದ ಮಹಾದೇವ ಗಿಡ್ನವರ, ಶಂಕರ ವನಕಿ. ಮುತ್ತೆಪ್ಪ ತಳಕಟ್ನಾಳ, ಲಕ್ಕಪ್ಪ ಗೋಣಿ, ಬಾಪು ದೊಶೆ ಭಜಂತ್ರಿ, ರಾಮೋಜಿ ಮಾಳಗಿ, ವಿಠ್ಠಲ ಖಿಲಾರಿ, ಅಡವೀಶ ಅಂಗಡಿ, ತಿಪ್ಪಣ್ಣ ಕುಂದರಗಿ, ಸುವರ್ಣ ತುರಾಯಿ, ಬಸವರಾಜ ಹಟ್ಟಿಗೌಡರ, ಸಂಘದ ಮುಖ್ಯಕಾರ್ಯನಿರ್ವಾಹಕ ಬಾಳಯ್ಯಾ ಪೂಜಾರಿ, ಸದಸ್ಯರು ಸೇರಿದಂತೆ ಅನೇಕರು ಇದ್ದರು.