ಗೋಕಾಕ:ಶಿಕ್ಷಕರು ಬದಲಾವಣೆಯೊಂದಿಗೆ ನಿರಂತ ಅಧ್ಯಯನ ಶೀಲರಾಗಬೇಕು : ಡಾ.ಸಿ.ಕೆ.ನಾವಲಗಿ

ಶಿಕ್ಷಕರು ಬದಲಾವಣೆಯೊಂದಿಗೆ ನಿರಂತ ಅಧ್ಯಯನ ಶೀಲರಾಗಬೇಕು : ಡಾ.ಸಿ.ಕೆ.ನಾವಲಗಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 5 :
ಇಂದಿನ ಸ್ವಧಾತ್ಮಕ ಯುಗದಲ್ಲಿ ಶಿಕ್ಷಕರು ಬದಲಾವಣೆಯೊಂದಿಗೆ ನಿರಂತ ಅಧ್ಯಯನ ಶೀಲರಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಸಿ.ಕೆ.ನಾವಲಗಿ ಹೇಳಿದರು
ಗುರುವಾರದಂದು ನಗರದ ನವ ಜೀವನ ಮಿಷನ್ ಸ್ಕೂಲ್ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲದವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಹುಟ್ಟು ಹಬ್ಬದ ನೆನಪಿನಲ್ಲಿ ಹಮ್ಮಿಕೊಂಡ ಗುರು ಸ್ಮರಣೆ ಹಾಗೂ ನಿವೃತ್ತ ಶಿಕ್ಷಕರ ಸಮ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಶಿಕ್ಷಕರು ಸೃಜನಶೀಲತೆಯೊಂದಿಗೆ ವಿದ್ಯಾರ್ಥಿಗಳ ಸಾರ್ಮರ್ಥ್ಯಕಿಂತ ಹೆಚ್ಚಿನ ಜ್ಞಾನ ಪಡೆದು ಭೋದಿಸಿದರೆ ಆದರ್ಶ ಶಿಕ್ಷಕರಾಗಲು ಸಾಧ್ಯವೆಂದ ಅವರು ಪ್ರಕೃತಿ ವಿಕೋಪಗಳ ಕಾರಣಗಳನ್ನು ಅರಿತು ಅವುಗಳ ಪರಿಹಾರಕ್ಕೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಮುಂದಿನ ಪೀಳಿಗೆಯನ್ನು ರಕ್ಷಿಸುವಂತೆ ಕರೆ ನೀಡಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾ.ಪಂ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಬಸವರಾಜ ಹೆಗ್ಗನಾಯಿಕ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರ ಹಾಗೂ ಸ್ವಾರ್ಥ ರಹಿತಿವಾಗಿದ್ದು, ತಾಯಿಯ ನಂತರದ ಸ್ಥಾನವನ್ನು ಪಡೆದಿದೆ. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಿ ಅವರ ವ್ಯಕ್ತಿತ್ವವನ್ನು ರೂಪಿಸಿ ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುವ ಶೀಲ್ಪಿಗಳಾಗಿದ್ದಾರೆ ಅವರನ್ನು ಗೌರವಿಸಿ ಅವರ ಮಾರ್ಗ ದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ಸುಂದರ ಗೋಳಿಸಿಕೋಳುವಂತೆ ಹೇಳಿದರು
ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 120860 ರೂಗಳ ಚೆಕ್ಕನ್ನು ತಾಲೂಕಾಡಳಿತಕ್ಕೆ ಹಸ್ತಾಂತರಿಸಿದರು . ಇದೇ ಸಂದರ್ಭದಲ್ಲಿ ವಲಯದ ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಹಿಸಿದ್ದರು.
ವೇದಿಕೆಯ ಮೇಲೆ ಗಣ್ಯರಾದ ವಾಯ್.ಬಿ.ನಾಯಿಕ ಆರ್.ಎ ಗಾಣಿಗೇರ ,ಬಾಬು ವರ್ಗಿಸ , , ಎಂ.ಬಿ.ಪಾಟೀಲ ,ವ್ಹಿ.ಎಸ್.ಸೂಲೇಗಾಂವಿ ಬಿ.ಎಸ್.ಕುರ್ಲಕಣಿ, ಎಂ.ಡಿ.ಬೇಗ್,ಎಸ್.ಕುರ್ಲಕಣಿ, ಎ.ಬಿ.ಮಲಬನ್ನವರ ,ಎಸ್.ಎಸ್.ನೇಗಳಿ,ಸಂಜು ನಾಯಿಕ ಎಸ್.ಎಸ್.ಮಾಳಗಿ,ಬಿ.ಆರ್.ಮುರಘೋಡ,ಮಂಜುನಾಥ್ ಕುಡ್ಡೋಳ್ಳಿ, ಗಿರೀಶ ಝಂವರ, ಎಸ್.ಎಸ್.ಚೌಗಲಾ,ಆರ್.ಬಿ.ಢವಳೇಶ್ವರ ಇದ್ದರು
ಜಿ.ಆರ್.ಮಾಳಗಿ ಸ್ವಾಗತಿಸಿದರು, ಆರ್.ಎಲ್.ಮೀರ್ಜಿ ವಂದಿಸಿದರು