ಬೆಳಗಾವಿ:ಪ್ರವಾಹದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 25 ಸಾವಿರ ರು. ಪರಿಹಾರ ವಿತರಿಸಿದ ಟಿ.ಎ.ನಾರಾಯಣಗೌಡ

ಪ್ರವಾಹದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 25 ಸಾವಿರ ರು. ಪರಿಹಾರ ವಿತರಿಸಿದ ಟಿ.ಎ.ನಾರಾಯಣಗೌಡ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಅ 19 :
ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಉಂಟಾಗಿದ್ದ ಭಾರಿ ಪ್ರಮಾಣದ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದಿಂದ ತಲಾ 25 ಸಾವಿರ ರು.ಗಳ ಪರಿಹಾರ ವಿತರಿಸಾಯಿತು .
ಸೋಮವಾರದಂದು ಸಾಯಂಕಾಲ 5 ಘಂಟೆಗೆ ನಗರದ ಕೆಪಿಟಿಸಿಎಲ್ ಸಭಾ ಭವನದಲ್ಲಿ ಧನ ಸಹಾಯ ವಿತರಿಸಿ ಕುಟುಂಬಸ್ಥರಿಗೆ ಸಾತ್ವಾಂನ ಹೇಳಿದರು
ಮೊದಲ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ ಬೆಳಗಾವಿ ,ಬಾಗಲಕೋಟ,ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೃತಪಟ್ಟ 17 ವ್ಯಕ್ತಿಗಳ ಕುಟುಂಬಗಳಿಗೆ ನಗದು ಪರಿಹಾರ ವಿತರಿಸಲಾಯಿತು