ಬೆಳಗಾವಿ:ಪ್ರವಾಹ ಹಿನ್ನೆಲೆ : ಇಂದು ಕರವೇಯಿಂದ ಮೃತಪಟ್ಟ ಕುಟುಂಬಗಳಲ್ಲಿಗೆ ತಲಾ 25000 ರು.ಪರಿಹಾರ ವಿತರಣೆ

ಪ್ರವಾಹ ಹಿನ್ನೆಲೆ : ಇಂದು ಕರವೇಯಿಂದ ಮೃತಪಟ್ಟ ಕುಟುಂಬಗಳಲ್ಲಿಗೆ ತಲಾ 25000 ರು.ಪರಿಹಾರ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಅ 19 :
ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಉಂಟಾಗಿದ್ದ ಭಾರಿ ಪ್ರಮಾಣದ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನೆರೆವಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಹಾಯ ಹಸ್ತ ಚಾಚಿದ್ದು , ಪ್ರಾವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಸಾವಿರ ರು.ಗಳ ಪರಿಹಾರ ವಿತರಿಸುತ್ತಿದೆ.
ಮೊದಲ ಹಂತದಲ್ಲಿ ಉತ್ತರ ಕರ್ನಾಟಕ ಭಾಗಜ ವಿವಿಧ ಜಿಲ್ಲೆಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಸೋಮಾವಾರದಂದು ಬೆಳಗಾವಿಯಲ್ಲಿ ಪರಿಹಾರ ಮೊತ್ತವನ್ನು ವಿತರಿಸಲಾಗುತ್ತದೆ.
ಪರಿಹಾರದ ಮೊತ್ತವನ್ನು ವಿತರಿಸುವುದಕ್ಕಾಗಿ ಈ ಭಾಗದ ಜಿಲ್ಲೆಗಳಲ್ಲಿ ಜೀವ ಕಳೆದುಕೊಂಡಿರುವವರ ಕುಟುಂಬಸ್ಥರನ್ನು ಈಗಾಗಲೇ ಬೆಳಗಾವಿಗೆ ಆಹ್ವಾನಿಸಲಾಗಿದೆ.
ಸೋಮವಾರದಂದು ಸಾಯಂಕಾಲ 5 ಘಂಟೆಗೆ ನಗರದ ಕೆಪಿಟಿಸಿಎಲ್ ಸಭಾ ಭವನದಲ್ಲಿ ಧನ ಸಹಾಯ ವಿತರಣೆ ಮಾಡುವ ಸಮಾರಂಭ ನಡೆಯಲ್ಲಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ, ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ನೊಂದ ಕುಟುಂಬಗಳಿಗೆ ಪರಿಹಾರ ವಿತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.