ಗೋಕಾಕ:ಪ್ರೋ. ಮಹಾನಂದಾ ಪಾಟೀಲ ಅವರಿಗೆ ಡಾ. ಆರ್ ಜೆ ಗಲಗಲಿ ದತ್ತಿ ಪ್ರಶಸ್ತಿ
ಪ್ರೋ. ಮಹಾನಂದಾ ಪಾಟೀಲ ಅವರಿಗೆ ಡಾ. ಆರ್ ಜೆ ಗಲಗಲಿ ದತ್ತಿ ಪ್ರಶಸ್ತಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 :
ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಧ್ಯಾಪಕಿ ಹಾಗೂ ಸಾಹಿತಿ ಪ್ರೋ. ಮಹಾನಂದಾ ಪಾಟೀಲ ಅವರು ಬರೆದ “ನನ್ನೊಳಗಿನ ಬುದ್ಧ” ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದವರು ಕೊಡುವ ಡಾ. ಆರ್ ಜೆ ಗಲಗಲಿ ದತ್ತಿ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವದು.