ಗೋವಾ :ಗೋವಾ ರಾಜ್ಯದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕರ್ನಾಟಕ ರಕ್ಷಣಾ ವೇದಿಕೆ ಬದ್ದವಾಗಿದೆ : ಬಸವರಾಜ ಖಾನಪ್ಪನವರ

ಗೋವಾ ರಾಜ್ಯದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕರ್ನಾಟಕ ರಕ್ಷಣಾ ವೇದಿಕೆ ಬದ್ದವಾಗಿದೆ : ಬಸವರಾಜ ಖಾನಪ್ಪನವರ
ನಮ್ಮ ಬೆಳಗಾವಿ ಸುದ್ದಿ , ಗೋವಾ (ವಾಸ್ಕೋ) ಜು 10 :
ಗೋವಾ ರಾಜ್ಯದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಂಕಣಬದ್ದವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಬುದವಾರದಂದು ಗೋವಾ ರಾಜ್ಯದ ವಾಸ್ಕೋದ ಜುವಾರಿ ನಗರದಲ್ಲಿರುವ ಕಾಳಿದಾಸ ಶಿಕ್ಷಣ ಸಂಸ್ಥೆಯ ಯಲ್ಲಾಲಿಂಗೇಶ್ವರ ಕನ್ನಡ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿ ಅವರು ಮಾತನಾಡಿದರು.
ಕಳೆದ 9 ವರ್ಷಗಳಿಂದ ಗೋವಾ ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ವಿದ್ಯಾರ್ಥಿಗಳಿಗೆ ನೆರೆಯಾಗುವ ಕಾರ್ಯ ತೃಪ್ತಿ ತಂದಿದ್ದು ಮುಂದಿನ ದಿನಗಳಲ್ಲಿ ಗೋವಾ ರಾಜ್ಯದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಲಾಗುವದು . ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಪಡೆದು ಗೋವಾ ರಾಜ್ಯದಲ್ಲಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಬೇಕು . ಗೋವಾ ರಾಜ್ಯದಲ್ಲಿರುವ ಎಲ್ಲ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಗೋವಾ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಾದ ಜಾತಿ ಪ್ರಮಾಣ ಪತ್ರ , ಶಾಶ್ವತ ವಸತಿ ಸೇರಿದಂತೆ ಇನ್ನೀತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳನ್ನು ಸಂಘಟಿಸಿ ಗೋವಾ ಸರಕಾರದ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಖಾನಪ್ಪನವರ ಹೇಳಿದರು .
ಇದೇ ಸಂದರ್ಭದಲ್ಲಿ 8,9,ಮತ್ತು 10ನೇ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕ್ರಮವಾಗಿ 30 ಜೊತೆಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಧಾನ ಗುರುಮಾತೆ ಶ್ರೀಮತಿ ಸುಜಾತಾ ಮನ್ನಿಕೇರಿ ವಹಿಸಿದ್ದರು
ವೇದಿಕೆಯಲ್ಲಿ ಗೋವಾ ಕನ್ನಡ ಸಂಘದ ಕಾರ್ಯದರ್ಶಿ ಶಿವಾನಂದ ಬಿಂಗಿ , ಆಡಳಿತ ಮಂಡಳಿಯ ಸದಸ್ಯ ರೂಪೇಶ ಅಂಗಡಿ , ವಿಠ್ಠಲ ಲಕ್ಕೂಂಡಿ , ರಾಜೇಶ ಶೆಟ್ಟಿ , ಕರವೇ ಪದಾಧಿಕಾರಿಗಳಾದ ಸಾದಿಕ ಹಲ್ಯಾಳ, ಗೋವಾ ಅಧ್ಯಕ್ಷ ಭರಮಣ್ಣಾ ಕಟ್ಟಿಮನಿ , ಸುರೇಶ ಪತ್ತಾರ , ಅಶೋಕ ಬಂಡಿವಡ್ಡರ , ಲಕ್ಷ್ಮಣ ಗೋರಗುದ್ದಿ , ಅಜರ ಸನದಿ , ಹಣಮಂತ ಅಮ್ಮಣಗಿ, ಗುಂಡುರಾವ ಗುಜನಟ್ಟಿ , ಶಿಕ್ಷಕಿಯರಾದ ಶ್ರೀಮತಿ ಸ್ವಾತಿ ಲೋನಕಡಿ , ವಿಜಯಲಕ್ಮೀ ಗೌಡರ ಉಪಸ್ಥಿತರಿದ್ದರು .
ಈ ಕಾರ್ಯಕ್ರಮವನ್ನು ಶಿಕ್ಷಕ ವಿ.ಟಿ.ಆರಿಬೆಂಚಿ ನಿರೂಪಿಸಿದರು . ಶಿಕ್ಷಕಿ ಶ್ರೀಮತಿ ವಿದ್ಯಾ ಸಾಂವತ ವಂದಿಸಿದರು