ಗೋಕಾಕ:ಸಾಹಿತ್ಯ ಸಮ್ಮೇಳನದ ಮೆರವಣಿಗೆ ವೈಭವದ ಚಾಲನೆ : ಜನಮನ ಸೆಳೆದ ಕಲಾ ತಂಡಗಳು , ವೇಷಭೂಷಣಗಳು

ಸಾಹಿತ್ಯ ಸಮ್ಮೇಳನದ ಮೆರವಣಿಗೆ ವೈಭವದ ಚಾಲನೆ : ಜನಮನ ಸೆಳೆದ ಕಲಾ ತಂಡಗಳು , ವೇಷಭೂಷಣಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 28 :
ದಿ.28 ಮತ್ತು 29 ಎರೆಡು ದಿನಗಳ ಕಾಲ ಜರುಗುತ್ತಿರುವ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರು ಡೊಳ್ಳು ಬಾರಿಸುವ ಮುಖೇನ ಚಾಲನೆ ನೀಡಿದರು
ಮೆರವಣಿಗೆಯಲ್ಲಿ ತಾಲೂಕಿನ ಎಲ್ಲ ಕಲಾವಿದರು ಭಾಗವಹಿಸಿ ಮೆರವಣಿಗೆ ಮೆರಗನ್ನು ಹೆಚ್ಚಿಸಿದರು. ದಟ್ಟಿ ಕುಣಿತ , ಡೊಳ್ಳು ಕುಣಿತ, ಬೊಂಬೆ ಕುಣಿತ , ಕರಡಿ ಮಜಲು , ಶಹನಾಯಿ , ಕುದುರೆ ಕುಣಿತ , ಕಹಳೆ ವಾದನ , ರಾಕ್ಷಸ ಕುಣಿತ ಸೇರಿದಂತೆ ಯಮರಾಜ , ಸಂಗೋಳ್ಳಿ ರಾಯಣ್ಣ , ಬಸವಣ್ಣವರ ವೇಷಭೂಷಣ ಧರಿಸಿದ ವೇಷಾಧಾರಿಗಳು ಜನಮನ ಸೊರಗೊಂಡವು .
ಮೆರವಣಿಗೆಯಲ್ಲಿ ಪ್ರತ್ಯಕ್ಷನಾದ ಕನ್ನಡದ ಹುಚ್ಚು ರಾಯ ಅಲಾಸೆ :
75 ವರ್ಷಗಳ ಇಳಿ ವಯಸ್ಸಿನ ಕನ್ನಡದ ಕುವರ ಎಂ.ಡಿ . ಅಲಾಸೆ ಅವರು ಸಮ್ಮೇಳನದ ಮೆರವಣಿಗೆಯಲ್ಲಿ ಕನ್ನಡದ ವೇಷಭೂಷಣ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು ಇದು ಅವರು ಭಾಗವಹಿಸಿದ 65 ನೇ ಮೆರವಣಿಗೆ ಯಾಗಿರುವದು ವಿಶೇಷವಾಗಿತ್ತು . ಹೀಗೆ ಆಗಮಿಸಿದ ಕನ್ನಡದ ಕುವರ ಅಲಾಸೆ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಕನ್ನಡದ ಶಲ್ಲೆಯನ್ನು ಧರಿಸಿ ಸನ್ಮಾನಿಸಿದರು . ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲ ಕನ್ನಡಿಗರು ಅಲಾಸೆ ಅವರನ್ನು ಮುಗಿಬಿದ್ದು ಛಾಯಾಚಿತ್ರ ತೆಗೆದುಕೊಂಡು ಸಂಭ್ರಮ ಪಟ್ಟರು .
ಗಮನ ಸೆಳೆದ ಜ್ಞಾನ ಪೀಠ ಪುರಸ್ಕೃತರ ಭವ್ಯ ರಥ :
13 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ಶಿಂಗಳಾಪೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಂಧುತ್ವ ವೇದಿಕೆಯವರು ಕನ್ನಡ ಭಾಷೆಗೆ ಎಂಟು ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಎಲ್ಲ ಮಾಹಾನ ಸಾಹಿತಿಗಳ ಭಾವ ಚಿತ್ರಗಳುವುಳ್ಳ ರಥವು ಕನ್ನಡ ಮನಸ್ಸುಗಳ ಗಮನ ಸೆಳೆಯಿತು
ಯಮರಾಯನ ಅಟ್ಟಹಾಸ : ಮೆರವಣಿಗೆ ಉದ್ದಕ್ಕೂ ಯವರಾಯನ ವೇಷಭೂಷಣ ಧರಿಸಿದ ವೇಷಧಾರಿಯೊಬ್ಬರು ಮೆರವಣಿಗೆ ಉದ್ದಕ್ಕೂವಿವಿಧ ಭಂಗಿಗಳನ್ನು ಪ್ರರ್ದಶಿಸಿ ತಮ್ಮ ಅಟ್ಟಹಾಸವನ್ನು ಮೆರೆದುದ್ದು ನೋಡುಗರನ್ನು ಹುಬ್ಬೇರಿಸುವಂತ್ತಿತ್ತು
ಬೆಳ್ಳಿ ರಥದಲ್ಲಿ ಸಾರ್ವಾಧ್ಯಕ್ಷರ ಮೆರವಣಿಗೆ :
13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಅವರನ್ನು ಬೆಳ್ಳಿ ರಥದಲ್ಲಿ ಕ್ರೂಡಿಸಿ ಸಮಾವೇಶ ಜರುಗುವ ಸ್ಥಳದವರೆಗೆ ಮೃರವಣಿಗೆ ಮಾಡಲಾಯಿತು
ಮರವಣಿಗೆಯಲ್ಲಿ ನೂರಾರು ಕನ್ನಡಾಭಿಮಾನಿಗಳಲ್ಲಿ ಪಾಲ್ಗೊಂಡು ಕನ್ನಡಾಭಿಮಾನ ಮೆರಮೆರೆದರು