RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಬೆಟಗೇರಿ-ಬಗರನಾಳ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ

ಗೋಕಾಕ:ಬೆಟಗೇರಿ-ಬಗರನಾಳ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ 

ಬೆಟಗೇರಿ-ಬಗರನಾಳ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ
ವಿವಿಧ ವಲಯದ ಸಾಧಕರಿಗೆರಿಗೆ ಪ್ರಶಸ್ತಿ ವಿತರಣೆ * ಗಣ್ಯರಿಗೆ ಸನ್ಮಾನ ಸಮಾರಂಭ * ನಾಟಕ ಪ್ರದರ್ಶನ,
ನಮ್ಮ  ಬೆಳಗಾವಿ ಸುದ್ದಿ, ಬೆಟಗೇರಿ ಫೆ 20 :

 

 

ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಬಗರನಾಳ ಗ್ರಾಮದ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ, ನಾಟಕ ಪ್ರದರ್ಶನ, ರಂಗಭೂಮಿ ನಟ ಸೇರಿದಂತೆ ವಿವಿಧ ವಲಯದಲ್ಲಿ ಸೇವೆಗೈದವರಿಗೆ ಪ್ರಶಸ್ತಿ ವಿತರಣೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಇದೇ ಶುಕ್ರವಾರÀ ಫೆ.22 ರಂದು ಜರುಗಲಿದೆ.
ಬೆಳಿಗ್ಗೆ 7ಗಂಟೆಗೆ ಶ್ರೀ ದೇವಿಯ ಗದ್ದುಗೆಗೆ ಮಹಾಪೂಜೆ, ಅಭಿಷೇಕ ನಡೆದ ಬಳಿಕ ಪುರಜನರಿಂದ ಉಡಿತುಂಬುವ, ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ 1ಗಂಟೆಗೆ ಮಹಾಪ್ರಸಾದ, ಸಾಯಂಕಾಲ 7ಗಂಟೆಗೆ ಗದಗ ಜಿಲ್ಲೆಯ ಶಿರೂಂಜಿ ಜ್ಞಾನಯೋಗಾಶ್ರಮದ ಬಸವ ಸಮರ್ಥ ಸ್ವಾಮಿಜಿ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಜಾತ್ರಾ ಮಹೋತ್ಸವ ಪ್ರಯುಕ್ತ ರಾತ್ರಿ 10.30 ಗಂಟೆಗೆ ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಜನಪ್ರೀಯ ಸಂಗೀತ ಬಳಗದವರ ಸಹಕಾರದೊಂದಿಗೆ ಬೆಟಗೇರಿ ಗ್ರಾಮದ ಆನಂದಕಂದ ಕಲಾನಾಟ್ಯ ಬಳಗದವರಿಂದ ಮಗ ಹೋದರು ಮಾಂಗಲ್ಯಬೇಕು ಎಂಬ ಸಾಮಾಜಿಕ ನಾಟಕ ಪ್ರದರ್ಶನ, ರಂಗಭೂಮಿ ಕಲಾವಿದರು ಸೇರಿದಂತೆ ವಿವಿಧ ವಲಯದ ಸಾಧಕರಿಗೆ ಪ್ರಶಸ್ತಿ, ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ಶಿಕ್ಷಕ ಶ್ರೀಶೈಲ ಕುಂಬಾರ ಅವರಿಗೆ ಶಿಕ್ಷಣರತ್ನ, ಬೆಟಗೇರಿ ಗ್ರಾಮದ ನಿರೂಪಕ, ರಂಗಭೂಮಿ ಕಲಾವಿದ ವೀರನಾಯ್ಕ ನಾಯ್ಕರ, ಬಸವರಾಜ ಬಡಿಗೇರ, ಮಹ್ಮದರಫೀಕ ಹಿರೇಕೊಪ್ಪ, ರಂಗಭೂಮಿ ಕಲಾವಿದೆ ಮಲ್ಲವ್ವ ಇಂಗಳಗಿ, ಶಿವಾಜಿ ಲಾಗವೆ ಅವರಿಗೆ ರಂಗಭೂಮಿ ಕಲಾರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಗದಗ ಜಿಲ್ಲೆಯ ಶಿರೂಂಜಿ ಜ್ಞಾನಯೋಗಾಶ್ರಮದ ಬಸವ ಸಮರ್ಥ ಸ್ವಾಮಿಜಿ, ಬಗರನಾಳದ ಶಿವಮೂರ್ತಯ್ಯ ಹಿರೇಮಠ ದಿವ್ಯ ಸಾನಿಧ್ಯ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಉದ್ಘಾಟನೆ, ಸುಭಾಷ ಹಾವಾಡಿ, ಸುಭಾಷ ಜಂಬಗಿ ಅಧ್ಯಕ್ಷತೆ ವಹಿಸಲಿದ್ದು, ಬಾಕುಬಾಯಿ ಜಾತ್ರಾ ಮಹೋತ್ಸವ ಸಮಿತಿ ಸಣ್ಣಪ್ಪ ಐದುಡ್ಡಿ ಸೇರಿದಂತೆ ಜಿಪಂ, ತಾಪಂ ಗ್ರಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಉಭಯ ಗ್ರಾಮಗಳ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಂತ, ಶರಣರು, ರಂಗಭೂಮಿ ಕಲಾವಿದರು, ಮುಖ್ಯ ಅತಿಥಿಗಳಾಗಿ, ಜ್ಯೋತಿ ಬೆಳಗಿಸಲು, ಬಲೂನ ಹಾರಿಸಲು, ಆಗಮಿಸಲಿದ್ದಾರೆ ಎಂದು ಉಭಯ ಗ್ರಾಮಗಳ ಜಾತ್ರಾ ಮಹೋತ್ಸವ, ನಾಟಕ ಪ್ರದರ್ಶನ, ಪ್ರಶಸ್ತಿ ವಿತರಣಾ ಆಯೋಜಕ ಸಮಿತಿಯವರು ಪ್ರಕಟನೆಯಲ್ಲಿ ತಿಳಿಸಿದೆ.

Related posts: