RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಬಿಜೆಪಿ ಬಲಿಷ್ಠವಾಗಲು ಪಂ.ದೀನದಯಾಳ ಉಪಾಧ್ಯಾಯರ ಆದರ್ಶಗಳೇ ಕಾರಣ

ಗೋಕಾಕ:ಬಿಜೆಪಿ ಬಲಿಷ್ಠವಾಗಲು ಪಂ.ದೀನದಯಾಳ ಉಪಾಧ್ಯಾಯರ ಆದರ್ಶಗಳೇ ಕಾರಣ 

ಬಿಜೆಪಿ ಬಲಿಷ್ಠವಾಗಲು ಪಂ.ದೀನದಯಾಳ ಉಪಾಧ್ಯಾಯರ ಆದರ್ಶಗಳೇ ಕಾರಣ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 11 :
ಭಾರತೀಯ ಜನತಾ ಪಾರ್ಟಿ ವಿಶ್ವದಲ್ಲಿಯೇ ಬಲಿಷ್ಠ ಪಕ್ಷವಾಗಲು ಪಂ.ದೀನದಯಾಳ ಉಪಾಧ್ಯಾಯರು ಹಾಕಿಕೊಟ್ಟ ತತ್ವಾದರ್ಶಗಳೇ ಕಾರಣವೆಂದು ಯುವಧುರೀಣ ನಾಗಪ್ಪ ಶೇಖರಗೋಳ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸೋಮವಾರದಂದು ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪಂ. ದೀನದಯಾಳ ಉಪಾಧ್ಯಾಯರ ಪುಣ್ಯತಿಥಿ ಅಂಗವಾಗಿ ಸಮರ್ಪಣಾ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪಂ. ಉಪಾಧ್ಯಾಯರ ಪಾತ್ರ ಗಣನೀಯವಾಗಿದೆ. ಇಂದು ಬಿಜೆಪಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರೆ ಅದಕ್ಕೆ ಉಪಾಧ್ಯಾಯರು ಕಾರಣ. ಜಗತ್ತಿನಲ್ಲಿಯೇ ಅತೀ ದೊಡ್ಡ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ. ಈ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ತನು-ಮನ-ಧನದಿಂದ ಕೆಲಸ ಮಾಡಿ ನವಭಾರತ ನಿರ್ಮಾಣಕ್ಕೆ ಮೋದಿ ಮತ್ತೊಮ್ಮೆ ಎಂಬ ಸಂಕಲ್ಪ ತೊಡಬೇಕೆಂದು ನಾಗಪ್ಪ ಶೇಖರಗೋಳ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎನ್‍ಎಸ್‍ಎಫ್ ಅತಿಥಿ ಗೃಹದ ಲಕ್ಕಪ್ಪ ಲೋಕುರಿ, ಸಿ.ಪಿ.ಯಕ್ಷಂಬಿ, ಎಂ.ಡಿ.ಪಾಟೀಲ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಸವರಾಜ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ, ಪುಂಡಲೀಕ ಮೇಟಿ, ಧರೆಪ್ಪ ಬಿ.ಗೌಡರ, ಮಾಯಪ್ಪ ಪೂಜೇರಿ, ನಿಂಗಪ್ಪ ಪೂಜೇರಿ, ಹಣಮಂತ ಅಜ್ಜನ್ನವರ, ಕೃಷ್ಣಾ ಗಡಕರಿ, ಮಹಾಂತೇಶ ಚೌಗಲಾ, ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

Related posts: