ಖಾನಾಪುರ:ಬರದ ನಡುವೆಯೂ ಗ್ರಾಮದ ಜನರಿಗೆ ನೀರು ಕುಡಿಸಿದ ಆಧುನಿಕ ಭಗಿರಥ : ಖಾನಾಪುರದಲ್ಲೊಬ್ಬ ಅಪರೂಪದ ರೈತ
ಬರದ ನಡುವೆಯೂ ಗ್ರಾಮದ ಜನರಿಗೆ ನೀರು ಕುಡಿಸಿದ ಆಧುನಿಕ ಭಗಿರಥ : ಖಾನಾಪುರದಲ್ಲೊಬ್ಬ ಅಪರೂಪದ ರೈತ
ಕಾಶೀಮ : ಖಾನಾಪುರ
ತಾಲೂಕಿನ ಗಡಿ ಭಾಗದಲ್ಲಿರುವ ಲಿಂಗನಮಠ ಗ್ರಾಮದ ರೈತ ಶಬ್ಬೀರಅಹ್ಮದ ಹಟ್ಟಿಹೊಳಿ ಇವರ ರಸ್ತೆಗೆ ಅಂಟಿಕೊಂಡೆ ಇರುವ ಹೊಲದಲ್ಲಿ ಸುಮಾರು 12 ವರ್ಷಗಳ ಹಿಂದೆ ಲಿಂಗನಮಠ ಗ್ರಾಪಂ ನವರು ಕೊಳವೆ ಬಾವಿ ಕೊರೆಸಿ ಇಂದಿನವರೆಗೆ ಹೊಸಲಿಂಗನಮಠ ಗ್ರಾಮಕ್ಕೆ ನೀರು ಪೂರೈಸುತ್ತಿದ್ದಾರೆ. ಅಂದು 12 ವರ್ಷದ ಹಿಂದೆ ಹೊಲದ ಮಾಲಿಕ ಮುಖ ಪ್ರಾಣಿಯಾದ ದನಕರುಗಳಿಗೆ ನೀರು ಕುಡಿಯಲು ಅನುಕೂಲವಾಗಲೆಂದು “ಅರ್ಧ ಇಂಚಿನ ನಳ” ಜೋಡಿಸಿಲು ವಿನಂತಿಸಿದರೂ ತನಗೆ ಗ್ರಾಮ ಪಂಚಾಯತಿಯವರು ಅನುವು ಮಾಡಿ ಕೊಡಲಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.
ಆದರೆ ಈಗ ಅದೇ ರೈತ ತನ್ನ ಜಮೀನಿನಲ್ಲಿ ಕಳೆದ ವರ್ಷ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದು 2.5 (ಎರಡುವರೆ) ಇಂಚಿನಷ್ಟು ನೀರು ಹೋರಬರುತ್ತದೆ. ಈ ವರ್ಷದ ಕಳೆದ ಮಾರ್ಚ ತಿಂಗಳು ಗ್ರಾಮದಲ್ಲಿ ಭೀಕರ ನೀರಿನ ಭವಣೆ ಉಂಟಾಗಿತ್ತು. ಆಗ ಹೊಸಲಿಂಗನಮಠ ಗ್ರಾಮದ ಜನರು ನಿಮ್ಮ ಬೊರವೆಲ್ ನಿಂದ ಗ್ರಾಮಕ್ಕೆ ಕುಡಿಯಲು ನೀರು ಪೂರೈಸಿ ಎಂದು ರೈತನಿಗೆ ಕೇಳಿಕೊಂಡಾಗ, ರೈತನು ಸ್ಥಳದಲ್ಲಿಯೇ ಪೈಪಲೈನ ಮೂಲಕ ನೀರು ಬೀಡಲು ಪೈಪಗಳ ಕೊರತೆಯಿದೆ ಯಾರಾದರೂ ಪೈಪಗಳ ಸಹಾಯ ಮಾಡಿದರೆ ಈ ಕ್ಷಣದಿಂದಲೇ ನೀರು ಪುರೈಸುತ್ತೆನೆ ಎಂದು ವಾಗ್ದಾನ ಮಾಡಿದಾಗ, ಕೆಲಹೊತ್ತಿನಲ್ಲಿಯೇ ಗ್ರಾಮದ ಯುವಕರು ಪೈಪಗಳನ್ನು ಜಮಾ ಮಾಡಿ ಪೈಪ ಜೋಡಿಸಲು ಸಹಾಯ ಮಾಡಿದರು. ಅಂದಿನಿಂದ ಇಂದಿನವರೆಗೂ ಹೊಸಲಿಂಗನಮಠ ಗ್ರಾಮದ ಸುಮಾರೂ 1200ಕ್ಕೂ ಅಧಿಕ ಜನರಿಗೆ ಹಗಲಿರುಳು ಶುದ್ಧ ಕುಡಿಯುವ ನೀರನ್ನು ಪೂರೈಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತೀವೃ ಬೇಸಿಗೆಯಲ್ಲೂ ಜಮೀನಿನಲ್ಲಿರುವ ಕಬ್ಬಿನ ಬೆಳೆ ಒಣಗುತ್ತಿದ್ದರೂ ಅದನ್ನು ಲೆಕ್ಕಿಸದೆ ಜನರಿಗೆ ನೀರು ಒದಗಿಸುತ್ತಿರುವ ಶಬ್ಬೀರಹ್ಮದ ಹಟ್ಟಿಹೊಳಿ ಅವರಿಗೆ ಇನ್ನೂವರೆಗೂ ಹೂಮಾಲೆ ಹಾಕಿ, ಮೆಚ್ಚುಗೆಯ ಮಾತನಾಡದಿರುವುದು ಗ್ರಾಮದ ಜನರ ಹಾಗೂ ಸ್ನೇಹಿತರ ಮನಸ್ಸಿಗೆ ತುಂಭಾ ಬೇಸರವ್ನುಂಟು ಮಾಡಿದೆ. ತನ್ನ ಕೊಳವೆ ಬಾವಿಯ ನೀರನ್ನು ಸಮೀಪದ ಗ್ರಾಪಂ ನವರ ಪೈಪಲೈನಗೆ ಜೋಡಿಸಿ ಗ್ರಾಮಕ್ಕೆ ನೀರು ಕೊಡಲಾಗುತ್ತಿರುವುದು ಗ್ರಾಮದ ಜನರಿಗೆ ಬರಗಾಲದ ಭವನೆಯಲ್ಲಿ ತಂಪು ನೀಡಿದೆ.
ರೈತನ ಹೊಲದ ಸುತ್ತಮುತ್ತಲಿರುವ ಸುಮಾರೂ 12 ಬೊರವೆಲಗಳಲ್ಲಿ ನೀರು ಬತ್ತಿಹೋಗಿವೆ,ಆದರೆ ಇವರ ಬೊರವೆಲನಲ್ಲಿ ಮಾತ್ರ ನೀರು ಕಡಿಮೆ ಆಗದೆ ಪೂರೈಸುತ್ತಿರುವುದಕ್ಕೆ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೋತೆಗೆ ಲಿಂನಗಮಠ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಲಿಂಗನಮಠ, ವಾಲ್ಮೀಕಿನಗರ ಮತ್ತು ಹೊಸಲಿಂಗನಮಠ ಗ್ರಾಮಕ್ಕೆ ಸಂಭಂಧಿಸಿ 1 ಪಂಚಾಯತಿಯ, 1ಖಾಸಗಿ ಹಾಗೂ ಇನ್ನೊಂದು ಕರಾರು ಮೇಲೆ ಕೊಳವೆ ಬಾವಿಗಳಿಂದ ಮಾತ್ರ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ನಿಸ್ವಾರ್ಥ ಭಾವದಿಂದ ಗ್ರಾಮದ ಜನರಿಗೆ ಕುಡಿಯಲು ನೀರು ಒದಗಿಸುತ್ತಿರುವ ರೈತ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾನೆ
ಡಾ.ಕೆ.ಬಿ,ಹಿರೇಮಠ : ಅಧ್ಯಕ್ಷ ಗ್ರಾಪಂ ಲಿಂಗನಮಠ:
ಶಬ್ಬೀರಹ್ಮದ ಹಟ್ಟಿಹೊಳಿ ರೈತ ತಮ್ಮ ಸ್ವಂತ ಖರ್ಚಿನಲ್ಲಿ ಕೊರೆಸಿದ ಕೊಳವೆ ಬಾವಿಯಿಂದ ಹೊಸಲಿಂಗನಮಠ ಗ್ರಾಮದ ಜನತೆಗೆ ಕುಡಿಯುವ ನೀರು ಪೂರೈಸುತ್ತಿರುವುದಕ್ಕೆ, ಜನರಿಗೆ ನೀರಿನ ಬರ ಇಲ್ಲದಂತಾಗಿದ್ದು, ಹೊಲಕ್ಕೆ ನೀರು ಹಾಯಿಸುವೂದನ್ನು ಬಿಟ್ಟು, ಗ್ರಾಮದ ಜನರಿಗೆ ನೀರು ಉಪಕಾರ ಮಾಡಿದ್ದಾರೆ. ಇವರು ನೀರು ಪೂರೈಸುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಜೋತೆ ಚರ್ಚಿಸಿದ್ದು, ಸರಕಾರದಿಂದ ಸಿಗುವ ಸಹಾಯ ಧನವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ,
ಶಬ್ಬೀರಹ್ಮದ ಹಟ್ಟಿಹೊಳಿ : ಹೊಸಲಿಂಗನಮಠ ಗ್ರಾಮಕ್ಕೆ ನೀರು ನೀಡುತ್ತಿರುವ ರೈತ :
ಲಿಂಗನಮಠ ಗ್ರಾಪಂ ನವರ ಎಲ್ಲ ಕೊಳವೆ ಬಾವಿಗಳು ಬತ್ತಿದ್ದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ನನ್ನ ಸ್ವಂತ ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಪೂರೈಸಿ ಜನರ ದಾಹ ನೀಗಿಸಿರುವುದಕ್ಕೆ ನನಗೆ ತುಂಬಾ ಸಂತೋಷ ಅನಿಸುತ್ತಿದೆ. ಅಂತಹ ಬೇಸಿಗೆಯಲ್ಲೂ ನನ್ನ ಸ್ವಂತ ಕೊಳವೆ ಬಾವಿಯಲ್ಲಿ ನೀರು ಬರುತ್ತಿರುವುದು, ಇದು ನನಗೆ ದೇವರು ಕೊಟ್ಟ ವರದಾನವಾಗಿದೆ, ಹೀಗಾಗಿ ನಾನು ಕುಡಿಯುವ ನೀರಿನಿಂದ ತತ್ತರಿಸುತ್ತಿರುವ ಗ್ರಾಮದ ಜನರಿಗೆ, ನೀರು ಪೂರೈಸುವ ಮೂಲಕ ದೇವರ ಋಣ ತೀರಿಸಬೇಕಾಗಿದೆ ಎಂದು ಹೇಳುತ್ತಾರೆ.