RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ :ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಉಚಿತ ಯುರೋಲಾಜಿ ಶಿಬಿರದಲ್ಲಿ ಡಾ.ಎ.ಎಂ.ಮುಂಗರವಾಡಿ ಸಲಹೆ

ಗೋಕಾಕ :ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಉಚಿತ ಯುರೋಲಾಜಿ ಶಿಬಿರದಲ್ಲಿ ಡಾ.ಎ.ಎಂ.ಮುಂಗರವಾಡಿ ಸಲಹೆ 

ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಉಚಿತ ಯುರೋಲಾಜಿ ಶಿಬಿರದಲ್ಲಿ ಡಾ.ಎ.ಎಂ.ಮುಂಗರವಾಡಿ ಸಲಹೆ

ಗೋಕಾಕ ಮೇ 13: ದಿನನಿತ್ಯದ ಜಂಜಾಟಗಳನ್ನು ಬದಿಗೋತಿ ಮನುಷ್ಯ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಮೂತ್ರರೋಗ ತಜ್ಞ ಡಾ.ಅಮೀತ ಮುಂಗರವಾಡಿ ಹೇಳಿದರು.

ಇಂದು ಇಲ್ಲಿಯ ಮುಂಗರವಾಡಿ ಆಸ್ವತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಯುರೋಲಾಜಿ ಸಲಹಾ ಶಿಬಿರದಲ್ಲಿ ರೋಗಿಗಳನ್ನು ತಪಾಸಣೆ ಅವರು ಮಾಡಿ ಮಾತನಾಡಿದರು.
ಶರೀರ ಸಂಪತ್ತು ಮನುಷ್ಯನ ಜೀವನದಲ್ಲಿ ಅತಿ ಅಮೂಲ್ಯವಾಗಿದೆ ಆರೋಗ್ಯದಲ್ಲಿ ಏನಾದರು ಹೇರು ಪೇರಾದಾಗ ನಿರ್ಲಕ್ಷ್ಯ ವಹಿಸದೆ ಕೂಡಲೇ ವೈದ್ಯರನ್ನು ಕಾಣಿ ಆರೋಗ್ಯ ಪರೀಕ್ಷಿಸಕೋಳಬೇಕೆಂದು ಸಲಹೆ ನೀಡಿದರು.

ಮುಂಜಾನೆ 10 ರಿಂದ ಸಾಯಂಕಾಲ 4 ಘಂಟೆ ವರೆಗೆ ನಡೆದ ಈ ಶಿಬಿರದಲ್ಲಿ ಮೂತ್ರ ವಿಸರ್ಜಿಸುವಾಗ ಉರಿತ ನೋವು , ಪ್ರೋಸ್ಟೇಟ ಗ್ರಂಥಿ ಸಮಸ್ಯೆ ,ಮೂತ್ರದಲ್ಲಿ ರಕ್ತ , ರಾತ್ರಿ ವೇಳೆ ಮೂತ್ರ ವಿಸರ್ಜನೆ , ಮೂತ್ರ ಪಿಂಡದ ಕಲ್ಲು , ಸೇರಿದಂತೆ ಮೂತ್ರಪಿಂಡ ಸಂಬಂಧಿ ಇನ್ನೀತರ ರೋಗಗಳಿಂದ ಬಳಲುತ್ತಿರುವ ಸುಮಾರು 70ಕ್ಕೂ ಹೆಚ್ಚು ರೋಗಿಗಳು ಭಾಗವಹಿಸಿ ಆರೋಗ್ಯವನ್ನು ತಪಾಸಣೆ ಮಾಡಿಕೊಂಡರು.

Related posts: