ಗೋಕಾಕ:ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ

ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ
ಗೋಕಾಕ ಮೇ 28 : ಕಾಂಗ್ರೇಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಸೋಮವಾರದಂದು ಬಿಜೆಪಿಯಿಂದ ರಾಜಾದ್ಯಂತ ಕರ್ನಾಟಕ ಬಂದ ಕರೆ ನೀಡಿದ ಹಿನ್ನಲೆಯಲ್ಲಿ ಗೋಕಾಕ ನಗರದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು 1 ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿ, ಟೈರ್ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಅಶೋಕ ಪೂಜಾರಿ, ಚುನಾವಣೆಯ ಪೂರ್ವದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದ ಎಚ್ಡಿಕೆ ಅವರು ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಕಾರಣ ನೀಡಿ ರೈತರ ಸಾಲ ಮನ್ನಾ ಮಾಡುವಲ್ಲಿ ಮೀನಾಮೇಷವನ್ನು ಏಣಿಸುತ್ತಿರುವುದು ಇಡೀ ರೈತ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಕೊಟ್ಟ ಮಾತಿನಂತೆ ನಡೆಯದೇ ಸಿಎಂ ಕುಮಾರಸ್ವಾಮಿಯವರು ಕಾಲಾವಕಾಶವನ್ನು ಕೇಳುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತದಲ್ಲ ಕೊಟ್ಟ ಮಾತಿನಂತೆ ಆದಷ್ಟು ಬೇಗನೆ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರಲ್ಲದೇ ಒಂದು ವೇಳೆ ಮಾಡದೇ ಹೋದರೆ ರಾಜ್ಯ ನಾಯಕರ ನೇತ್ರತ್ವದಲ್ಲಿ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಗ್ರೇಡ್-2 ತಹಶೀಲದಾರ ಎಸ್.ಕೆ.ಕುಲಕರ್ಣಿ ಅವರಿಗೆ ಮನವಿ ಅರ್ಪಿಸಿದರು.

ಬಿಜೆಪಿಯಿಂದ ರಾಜಾದ್ಯಂತ ಕರ್ನಾಟಕ ಬಂದ ಕರೆ ನೀಡಿದ ಹಿನ್ನಲೆಯಲ್ಲಿ ಗೋಕಾಕ ನಗರದಲ್ಲಿ ತೀವೃ ಪ್ರತಿಭಟನೆಗೆ ಮುಂದಾದಾಗ ಬಿಜೆಪಿ ಮುಖಂಡರನ್ನು ಪೋಲಿಸರು ಬಂಧಿಸಿದರು.
ಬಂಧನ ಬಿಡುಗಡೆ: ಬಿಜೆಪಿಯಿಂದ ರಾಜಾದ್ಯಂತ ಕರ್ನಾಟಕ ಬಂದ ಕರೆ ನೀಡಿದ ಹಿನ್ನಲೆಯಲ್ಲಿ ಗೋಕಾಕ ನಗರದಲ್ಲಿ ತೀವೃ ಪ್ರತಿಭಟನೆಗೆ ಮುಂದಾದಾಗ ಬಿಜೆಪಿ ಮುಖಂಡರನ್ನು ಪೋಲಿಸರು ಮುಂಜಾಗೃತ ಕ್ರಮವಾಗಿ ಬಂಧಿಸಿ ಠಾಣೆಗೆ ಕರೆಯ್ದೊದು ಸಾಯಂಕಾಲ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರುಗಳಾದ ಎಸ್.ವಿ.ದೇಮಶೆಟ್ಟಿ, ವೀರುಪಾಕ್ಷ ಯಲಿಗಾರ, ಶಕೀಲ ಧಾರವಾಡಕರ, ಉಮೇಶ ನಿರ್ವಾಣಿ, ಪ್ರೇಮಾ ಚಿಕ್ಕೋಡಿ, ಶ್ರೀದೇವಿ ತಡಕೋಡ, ದಸ್ತಗೀರ ಪೈಲ್ವಾನ, ಬಸವರಾಜ ಹಿರೇಮಠ, ಸುನೀಲ ಮುರ್ಕಿಭಾಂವಿ, ರಾಜುಗೌಡ ನಿರ್ವಾಣಿ, ಅಶೋಕ ಬಂಗಾರಿ, ನಾಗಲಿಂಗ ಪೋತದಾರ, ರಾಜು ಕತ್ತಿ, ಸಂತೋಷ ಹುಂಡೆಕಾರ, ಲಕ್ಷ್ಮಣ ಶಿವಾಪೂರ, ಮಹಾಂತೇಶ ಮಲಕನ್ನವರ, ಈರಣ್ಣಾ ಅಂಗಡಿ, ಅಡಿವೆಪ್ಪ ಪಾಟೀಲ, ಸುಭಾಶ ಸಣ್ಣತಿಪ್ಪಗೋಳ, ರಾಮಪ್ಪ ದೇಮನ್ನವರ ಸೇರಿದಂತೆ ಅನೇಕರು ಇದ್ದರು.
ಗೋಕಾಕಕ್ಕೆ ತಟ್ಟದ ಬಂದ ಬಿಸಿ : ಬಿಜೆಪಿ ಬಂದ ಕರೆ ನೀಡಿದ್ದ ಹಿನ್ನಲೆಯಲ್ಲಿ ಗೋಕಾಕದಲ್ಲಿ ನಿರಸ ಪ್ರಕ್ರಿಯೆ ಉಂಟಾಯಿತು. ನಗರದಲ್ಲಿ ವ್ಯಾಪಾರಸ್ಥರ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಲ್ಲದೇ ವಾಹನ ಸಂಚಾರವು ನಡೆಯಿತು. ಕರ್ನಾಟಕ ಬಂದ್ ಬಿಸಿ ಗೋಕಾಕಕ್ಕೆ ತಟ್ಟಲಿಲ್ಲ.