RNI NO. KARKAN/2006/27779|Monday, June 16, 2025
You are here: Home » breaking news » ಬೈಲಹೊಂಗಲ:ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ

ಬೈಲಹೊಂಗಲ:ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ 

ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ

ಬೈಲಹೊಂಗಲ ಜ 9: ಕೊಟ್ಟ ಸಾಲ ಮರಳಿ ಕೇಳಿದಕ್ಕೆ ಚಾಕುವಿನಿಂದ ಕುತ್ತಿಗೆ ಕೋಯ್ದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬೈಲಹೊಂಗಲದ ಪತ್ರಿಬಸವ ನಗರದಲ್ಲಿ ನಿನ್ನೆ ನಡೆದ್ದಿದು ತಡವಾಗಿ ಬೆಳಕಿಗೆ ಬಂದಿದೆ

ಬೈಲಹೊಂಗಲದ ಶಶಿಕುಮಾರ್‌‌ ಎಂಬಾತನೆ ಘಟನೆಯಲ್ಲಿ ಗಾಯಗೊಂಡವ. ಈತನಿಂದ 6 ಸಾವಿರ ಸಾಲ ಪಡೆದಿದ್ದ ಮಾರುತಿ ಬಂಡಿವಡ್ಡರ್‌‌ನಿಂದ ಎಂಬಾತನೇ ಕೃತ್ಯವೆಸಗಿರುವ ಆರೋಪಿ ಎನ್ನಲಾಗಿದೆ. ಪಡೆದಿದ್ದ ಸಾಲವನ್ನು ಮರಳಿ ನೀಡುತ್ತೇನೆ ಎಂದು ಪುಸಲಾಯಿಸಿ ಕರೆದೊಯ್ದು ಬಂಡಿವಡ್ಡರ್‌‌, ಶಶಿಕುಮಾರ್‌‌ನ ಕತ್ತು ಕೊಯ್ದು ಕೊಲೆಗೈಯ್ಯಲು ಯತ್ನಿಸಿದ್ದಾನೆ ಎನ್ನಲಾಗಿದೆ. 

ಸಾಲ ಮರಳಿಸುತ್ತೇನೆಂದು ಪತ್ರಿ ಬಸವ ನಗರದ ನಿರ್ಜನ ಪ್ರದೇಶದಲ್ಲಿ ಶಶಿಕುಮಾರ್‌‌‌ನನ್ನು ಕರೆದೊಯ್ದಿದ್ದ. ಈ ವೇಳೆ ಮಾರುತಿ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಚಾಕುವಿನಿಂದ ಶಶಿಕುಮಾರ್‌‌ನ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ.

ಗಾಯಾಳು ಶಶಿಕುಮಾರ್‌‌ ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾನೆ. ಬಳಿಕ ಶಶಿಕುಮಾರ್‌‌‌ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಆರೋಪಿಗಳಾದ ಮಾರುತಿ ಹಾಗೂ ಇನ್ನಿಬ್ಬರು ಪರಾರಿಯಾಗಿದ್ದಾರೆ

Related posts: