ಗೋಕಾಕ:ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ನಡೆಸಲು ಸಾಧ್ಯ : ನ್ಯಾಯಾದೀಶ ಕೆ.ಎಂ ಶಂಕರ
ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ನಡೆಸಲು ಸಾಧ್ಯ : ನ್ಯಾಯಾದೀಶ ಕೆ.ಎಂ ಶಂಕರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 :
ಮಾನವ ಹಕ್ಕುಗಳ ರಕ್ಷಣೆಯಿಂದ ಜನತೆ ಶಾಂತಿಯುತ ಜೀವನ ನಡೆಸಲು ಸಾಧ್ಯ ಎಂದು ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾದೀಶರಾದ ಕೆ.ಎಂ ಶಂಕರ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗ ಜಿಲ್ಲಾ ಘಟಕ , ತಾಲೂಕಾ ಘಟಕ ,ತಾಲೂಕು ಕಾನೂನು ಸೇವೆಗಳ ಸಮಿತಿ , ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಆಯೋಗದ ತಾಲೂಕು ಘಟಕದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಾಚೀನ ಕಾಲದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರಲ್ಲಿ ,ಇಂದು ಹೆಚ್ಚುತ್ತಿರುವ ಜನ ಸಂಖ್ಯೆಯಿಂದ ಈ ಹಕ್ಕುಗಳ ಉಲ್ಲಂಘನೆಯಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಮಾನವ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಗಿದೆ. ಸಂವಿಧಾನದಲ್ಲಿ ನೀಡಿದ ಹಕ್ಕುಗಳ ಸಂರಕ್ಷಣೆಯಾಗಬೇಕು.ಸಾಮಾಜಿಕ ನ್ಯಾಯವನ್ನು ಸಮಾಜದಲ್ಲಿ ತರಬೇಕು. ಪ್ರತಿ ಪ್ರಜೆಗೆ ಎಲ್ಲಾ ರೀತಿಯ ಸಮಾನತೆ ದೋರೆಯಬೇಕು. ಜನತೆಯಲ್ಲಿ ಕಾನೂನು ಅರಿವು ಮೂಡಿಸಿ ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಜಾಗೃತಿಯೊಂದಿಗೆ ಅವುಗಳ ಪಾಲನೆ ಮಾಡುವ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆ ಮಾಡುವಂತೆ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗದ ಪದಾಧಿಕಾರಿಗಳಾದ ಅಶೋಕ ಕೆಂಗಣ್ಣವರ, ಮಹಾಂತೇಶ ತಾವಂಶಿ, ಸಿ.ಡಿ ಹುಕ್ಕೇರಿ, ಮಂಗಳಾ ಜಕಾತಿ, ಸಂಗೀತಾ ಬನ್ನೂರ, ವೇಶಾಲಿ ಭರಭರಿ, ವಾಣಿ ನಾಯಿಕ, ಸುಕನ್ಯಾ ಹೇರಲಗಿ, ಮಂಜುಳಾ ಮುಳ್ಳೂರ, ಶಾಮಾನಂದ ಪೂಜೇರಿ ಹಾಗೂ ಸಿಡಿಪಿಓ ಜಯಶ್ರೀ ಶೀಲವಂತ , ರಾಮಚಂದ್ರ ಕಾಕಡೆ, ಚೇತನ ಜೋಗನ್ನವರ, ವಿಜಯಲಕ್ಷ್ಮಿ ಮನಗುಂಡಿ ಉಪಸ್ಥಿತರಿದ್ದರು.