RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರ ಅಭಿವೃದ್ಧಿ : ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ

ಗೋಕಾಕ:ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರ ಅಭಿವೃದ್ಧಿ : ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ 

ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರ ಅಭಿವೃದ್ಧಿ : ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ
ಗೋಕಾಕ ಸೆ 17: ಅಧಿಕಾರ ಶಾಶ್ವತವಲ್ಲ. ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅವರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ವಾರ್ಡನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೆವೆ ಎಂದು ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ ಹೇಳಿದರು.

ಅವರು, ಇಲ್ಲಿಯ ಮಹಾಲಿಂಗೇಶ್ವರ ನಗರದಲ್ಲಿ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಳ, ಮುಬಾರಕ ಮಹೊಲ್ಲಾ, ಕುಬಾ ಮಹೊಲ್ಲಾ, ಉಸ್ಮಾನಿಯಾ ಮಹೊಲ್ಲಾ, ಮದರಸಾ ಮಹೊಲ್ಲಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕವ್ವಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯ ಮೇಲೆ ನಗರಸಭೆ ಸದಸ್ಯೆ ಶ್ರೀಮತಿ ವನಶ್ರೀ ಬಸವರಾಜ ಸಾಯನ್ನವರ, ತಾಹೀರ್ ಮುಲ್ಲಾ, ಹಸನಸಾಬ್ ಕಾಲೆಬಾಯ್, ಸಬ್ದುಲ್‍ರಜಾಕ್ ಸಿದ್ದಿಕ್ಕಿ, ಬಿ ಎಮ್ ಹತ್ತಿ, ಸಿಪ್ರಿ, ಸೇರಿದಂತೆ ಇತರರು ಇದ್ದರು.

Related posts: