ಗೋಕಾಕ:ಯುವಕರು ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೆಕು : ಫಕೀರಪ್ಪ ಹೊಸಮನಿ
ಯುವಕರು ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೆಕು : ಫಕೀರಪ್ಪ ಹೊಸಮನಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 22 :
ಯುವಕರು ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೆಕು ಎಂದು ಅಂಬೇಡ್ಕರ ಯುವ ಸೇನೆಯ ರಾಜ್ಯಾಧ್ಯಕ್ಷ ಫಕೀರಪ್ಪ ಹೊಸಮನಿ ಹೇಳಿದರು.
ಅವರು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಅಂಬೇಡ್ಕರ ಯುವ ಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರರ ತತ್ವಾದರ್ಶಗಳನ್ನು ಇಂದಿನ ಯುವ ಸಮುದಾಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೆಕು. ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಸತ್ತೇಪ್ಪ ಹೊಸಟ್ಟಿ, ಅಶೋಕ ಬಂಡಿವಡ್ಡರ, ಅಂಬೇಡ್ಕರ ಯುವ ಸೇನೆಯ ಮಾರುತಿ ಕೋಡೂರ, ಜಯಶ್ರೀ ಮಾದರ, ಕಿರಣ ಶಿವಾಳೆ, ಶ್ರೀಕಾಂತ ಬಂಡಿವಡ್ಡರ, ಪರುಶರಾಮ ಬಂಡಿವಡ್ಡರ, ಉತ್ತಮ ಹರಿಜನ ಸೇರಿದಂತೆ ಇತರರು ಇದ್ದರು.