ಗೋಕಾಕ:ಪ್ರವಾಹ ಭೀತಿ ಹಿನ್ನೆಲೆ : ಮಾರ್ಕಂಡೇ ಹಾಗೂ ಘಟಪ್ರಭಾ ನದಿ ಮೇಲಿನ ಲೋಳಸೂರ ಸೇತುವೆಗೆ ಯುವ ಧುರೀಣ ಲಖನ್ ಜಾರಕಿಹೊಳಿ ಭೇಟಿ

ಪ್ರವಾಹ ಭೀತಿ ಹಿನ್ನೆಲೆ : ಮಾರ್ಕಂಡೇ ಹಾಗೂ ಘಟಪ್ರಭಾ ನದಿ ಮೇಲಿನ ಲೋಳಸೂರ ಸೇತುವೆಗೆ ಯುವ ಧುರೀಣ ಲಖನ್ ಜಾರಕಿಹೊಳಿ ಭೇಟಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ನದಿ ದಂಡೆಯ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು ಯುವ ಧುರೀಣ ಲಖನ ಜಾರಕಿಹೊಳಿ ಅವರು ನಗರದ ಹೊರ ವಲಯದಲ್ಲಿರುವ ಮಾರ್ಕಂಡೇ ನದಿ ಮೇಲಿನ ಸೇತುವೆ ಹಾಗೂ ಘಟಪ್ರಭಾ ನದಿ ಮೇಲಿನ ಲೋಳಸೂರ ಸೇತುವೆ ಸೇತುವೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಲಖನ್ ಜಾರಕಿಹೊಳಿ ಮಾರ್ಕಂಡೇಯ-ಘಟಪ್ರಭಾ-ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿದ್ದು ನದಿ ದಂಡೆಯ ಗ್ರಾಮಗಳಲ್ಲಿ ಪ್ರವಾಹ ಭೀತಿಯುಂಟಾಗಿದೆ. ಹಿಡಕಲ್, ರಕ್ಕಸಕೊಪ್ಪ ಹಾಗೂ ಧುಪದಾಳ ಜಲಾಶಯದಿಂದ ಇನ್ನೂ ಹೆಚ್ಚಿನ ನೀರನ್ನು ಬಿಡುತ್ತಿರುವ ಹಿನ್ನಲೆಯಲ್ಲಿ ನದಿ ಪಾತ್ರದ ಜನತೆ ಜಾಗೃತೆಯನ್ನು ವಹಿಸಿ ಸುರಕ್ಷಿತ ಸ್ಥಳಗಳತ್ತ ತೆರಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸದಾ ಕಲಾಲ,ಆನಂದ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು