RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಡ್ರಾಮಾ ಜ್ಯೂನಿಯರ್ಸ್ ಪ್ರತಿಭೆ ಸ್ವಾತಿಗೆ ಅರಭಾವಿ ಶ್ರೀಗಳಿಂದ ಸನ್ಮಾನ

ಘಟಪ್ರಭಾ:ಡ್ರಾಮಾ ಜ್ಯೂನಿಯರ್ಸ್ ಪ್ರತಿಭೆ ಸ್ವಾತಿಗೆ ಅರಭಾವಿ ಶ್ರೀಗಳಿಂದ ಸನ್ಮಾನ 

ಡ್ರಾಮಾ ಜ್ಯೂನಿಯರ್ಸ್ ಪ್ರತಿಭೆ ಸ್ವಾತಿಗೆ ಅರಭಾವಿ  ಶ್ರೀಗಳಿಂದ ಸನ್ಮಾನ

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 9 :

ಸಮೀಪದ ಅರಭಾಂವಿಮಠದ ಶ್ರೀ ದುರದುಂಡೇಶ್ವರ ಜಾತ್ರಾ ಮಹೋತ್ಸವದ ಗುರುವಂದನಾ ಮತ್ತು ಧರ್ಮ ಚಿಂತನ ಗೋಷ್ಠಿ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅರಭಾವಿ ಗ್ರಾಮದ ಗ್ರಾಮೀಣ ಪ್ರತಿಭೆ ಡ್ರಾಮಾ ಜ್ಯೂನಿಯರ್ಸ್ ಸೀಜನ್-3ರ ಪ್ರಥಮ ಸ್ಥಾನ ಪಡೆದ ಪ್ರತಿಭೆ ಸ್ವಾತಿ ಅರಭಾವಿ ಇವಳಿಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಜಗದ್ಗುರು ಶ್ರೀ ಸಿದ್ಧರಾಮ ಮಹಾಸ್ವಾಮಿಜಿಯವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಘಟಪ್ರಭಾದ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಶ್ರೀ ದುರದುಂಡೇಶ್ವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ, ಹುಕ್ಕೇರಿಯ ಶ್ರೀ ಶಿವಬಸವ ಮಹಾಸ್ವಾಮಿಜಿ, ಶಿವಾನಂದ ಮಹಾಸ್ವಾಮಿಜಿ, ಸಚ್ಛಿದಾನಂದ ಮಹಾಸ್ವಾಮಿಜಿ,ಗುರುಬಸವ ಸ್ವಾಮಿಜಿ ಮಹಾಂತ ದೇವರು, ಶಿವಯ್ಯ ಸ್ವಾಮಿಜಿ ಅರಭಾವಿ, ಕರವೇ ಅಧ್ಯಕ್ಷ ಕೃಷ್ಣಾ ಬಂಡಿವಡ್ಡರ,ರಾಯಪ್ಪ ಬಂಡಿವಡ್ಡರ,ಶಂಕರ ಬಿಲಕುಂದಿ, ಕಾಡಯ್ಯ ದಡ್ಡಿ,ಬಿ.ವೈ.ಹಳ್ಳೂರ, ನಿಂಗಪ್ಪ ಇಳಿಗೇರ,ಅಶೋಕ ಅಂಗಡಿ, ಈರಪ್ಪ ಸಿದ್ನಾಳ, ಭೀಮಶಿ ಪಾತ್ರೋಟ ಇದ್ದರು.

Related posts: