ಘಟಪ್ರಭಾ:ಶಿವನ ಪ್ರೀತಿಗೆ ಪಾತ್ರರಾಗಲು ಶಿವನ ನಾಮಸ್ಮರಣೆ ಅಗತ್ಯವಾಗಿದೆ : ಸಿದ್ಧರಾಮ ಶ್ರೀ
ಶಿವನ ಪ್ರೀತಿಗೆ ಪಾತ್ರರಾಗಲು ಶಿವನ ನಾಮಸ್ಮರಣೆ ಅಗತ್ಯವಾಗಿದೆ : ಸಿದ್ಧರಾಮ ಶ್ರೀ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮಾ 6 :
ಶಿವನ ಪ್ರೀತಿಗೆ ಪಾತ್ರರಾಗಲು ಶಿವನ ನಾಮಸ್ಮರಣೆ ಅಗತ್ಯವಾಗಿದೆ ಎಂದು ರನ್ನಬೆಳಗಲಿಯ ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.
ಅವರು ಬುಧವಾರದಂದು ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿ ಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಮಹಾ ಶಿವರಾತ್ರಿ ಅಮವಾಸ್ಯೆ ನಿಮಿತ್ಯ 103ನೇ ಮಾಸಿಕ ಸುವಿಚಾರ ಚಿಂತನಗೋಷ್ಠಿ ಹಾಗೂ ಶ್ರೀ ನಿಜಗುಣ ದೇವರ ಕಿರೀಟ ಪೂಜಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿವರಾತ್ರಿ ಮನಗಳಲ್ಲಿ ಶಿವನ ದರ್ಶನ ಮಾಡುವ ಅವಕಾಶ ಒದಗಿಬಂದಿದೆ.ಶಿವರಾತ್ರಿ ಎಂದರೆ ಶುಭಕರ,ಶ್ರೇಯಸ್ಸು, ಮಂಗಳಕರವಾದುದು. ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಆರಾಧಿಸುವ ಮೂಲಕ ಆತನನ್ನು ಒಲಿಸಿಕೊಳ್ಳಬಹುದು.ಶಿವನು ಸೃಷ್ಟಿಯಲ್ಲಿ ಆವತರಿಸಿ ತನ್ನ ಕರ್ತವ್ಯ ನಿರ್ವಹಿಸಿದ ದ್ಯೋತಕವಾಗಿ ಶಿವರಾತ್ರಿ ಆಚರಿಸುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಠದ ಶ್ರೀ ನಿಜಗುಣ ದೇವರು ವಹಿಸಿ ಆಶೀರ್ವಚನ ನೀಡಿ ಚೈತನ್ಯ ಸ್ವರೂಪಿಯಾದ ಶಿವ ಎಲ್ಲೆಡೆ ವ್ಯಾಪಿಸಿಕೊಂಡಿದ್ದಾನೆ ಆತನಿಲ್ಲದ ಜಾಗವೇ ಇಲ್ಲ. ಸತ್ಯ ಇರುವ ಕಡೆಯಲ್ಲೆಲ್ಲಾ ಶಿವ ಇರುತ್ತಾನೆ. ಒಳ್ಳೇಯದು ಯಾವಾಗಲೂ ಹೃದಯದಿಂದ,ಮನಸ್ಸಿನಿಂದ ಮೂಡಿಬರಬೇಕು.ಅದು ನಿಜವಾದ ಅಂತಸತ್ವ. ನಿಸ್ವಾರ್ಥವೇ ನಿಜವಾದ ದೇವರು.ಶಿವನ ನಾಮ ಸ್ಮರಣೆಯಿಂದ ಮಾತ್ರ ಆಸೆ,ಮೋಹ,ಸುಖವನ್ನು ಗೆಲ್ಲಬಹುದು ಎಂದರು.
ಬಸವರಾಜ ಸುಂಕದ ಇವರಿಂದ ಅನ್ನದಾಸೋಹ ಮತ್ತು ಹಣಮಂತ ಸುಂಕದ ಇವರಿಂದ ಚಿಂತನ ದಾಸೋಹ ಜರುಗಿತು.
ಹಣಮಂತ ದಾಸರ, ಹಣಮಂತ ಪಾದಗಟ್ಟಿ,ಗಂಗಾಧರ ಗಿಳಿಹೊಸೂರ ಅವರಿಂದ ಸಂಗೀತ ಸೇವೆ ಜರುಗಿತು. ಶ್ರೀ ಸಿದ್ದಲಿಂಗೇಶ್ವರ ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜನಮನಸೊರೆಗೊಂಡಿತು.