ಗೋಕಾಕ:ನಗರಸಭೆ ಸದಸ್ಯೆ ಲಕ್ಷ್ಮೀ ದೇಶನೂರ ಅವರಿಂದ ಸಿಲೆಂಡರ್ ಗ್ಯಾಸ್ ಕಿಟ್ ವಿತರಣೆ
ನಗರಸಭೆ ಸದಸ್ಯೆ ಲಕ್ಷ್ಮೀ ದೇಶನೂರ ಅವರಿಂದ ಸಿಲೆಂಡರ್ ಗ್ಯಾಸ್ ಕಿಟ್ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ, 12 :
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಉಜ್ವಲ ಯೋಜನೆಯಡಿ ನಗರದ 29ನೇ ವಾರ್ಡಿನ ಅರ್ಹ ಫಲಾನುಭವಿಗಳಿಗೆ ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮೀ ಬಸವರಾಜ ದೇಶನೂರ ಅವರು ಸಿಲೆಂಡರ್ ಗ್ಯಾಸ್ ಕಿಟ್ಗಳನ್ನು ಸೋಮವಾರದಂದು ವಿತರಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ಸೋನವ್ವಾ ಹೊಸಮನಿ, ಮಹಾದೇವಿ ವಡಗೇರಿ, ರೇಣುಕಾ ತುಕ್ಕಾರ, ಆಶಾ ತುಕ್ಕಾರ, ಚೈತ್ರಾ ಹಿರೇಮಠ, ಶಾಲಿನಿ ಮಜ್ಜಗಿ, ಪವಿತ್ರಾ ಜಾಗನೂರ, ದ್ರಾಕ್ಷಾಯಿಣಿ ದಿವಟೆ, ಸುಭದ್ರಾ ಮಡಿವಾಳರ, ಮುಪ್ಪಯ್ಯನ ಮಠದ ಶ್ರೀ ರಾಚೋಟಿ ದೇವರು, ಮುಖಂಡರಾದ ರಾಜು. ಯ. ಜೋರಾಪೂರ, ಸುರೇಶÀ ಜೋರಾಪೂರ, ಬಸವರಾಜ ಶೇಗುಣಶಿ, ಧರೆಪ್ಪಾ ಕಲಗಾಣ, ಪ್ರಕಾಶ ಕುರಬೇಟ, ಸಂಜಯ ಹಿರೇಮಠ, ಸುಶೀಲಾ ದೇಶನೂರ, ಶಾಂತವ್ವಾ ಮಡಿವಾಳರ ಸೇರಿದಂತೆ ಅನೇಕರು ಇದ್ದರು.