ಗೋಕಾಕ:ಜೈನ್ ಇರಿಗೇಶನ್ ಕಂಪನಿ ವಿರುದ್ಧ ಕಿಡಿಕಾರಿದ -ಲಖನ್ ಜಾರಕಿಹೊಳಿ
ಜೈನ್ ಇರಿಗೇಶನ್ ಕಂಪನಿ ವಿರುದ್ಧ ಕಿಡಿಕಾರಿದ -ಲಖನ್ ಜಾರಕಿಹೊಳಿ
ಗೋಕಾಕ ಜ 14 : ನಗರದಲ್ಲಿ ನಡೆಯುತ್ತಿರುವ 24/7 ಕುಡಿಯುವ ನೀರಿನ ಯೋಜನೆ ಸಂಪೂರ್ಣ ಕಳಪೆ ಹಾಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಜೈನ್ ಇರಿಗೇಶನ್ ಕಂಪನಿ ವಿಫಲವಾಗಿದೆ ಎಂದು ಕಾಂಗ್ರೇಸ್ ಯುವ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
ಅವರು, ಸೋಮವಾರದಂದು ಪತ್ರಕರ್ತರೊಂದಿಗೆ ಮಾತನಾಡುತ್ತ ಕಳೆದ ಹಲವಾರು ವರ್ಷಗಳಿಂದ ನಗರಸಭೆ ಗೋಕಾಕ ನಗರದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತ ಬಂದಿದೆ. ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ಜನತೆಗೆ ನಿರಂತರ ನೀರು ಸೌಲಭ್ಯ ನೀಡುವ ಹಿತದೃಷ್ಟಿಯಿಂದ 24/7 ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದಾರೆ.
ಟೆಂಡರ್ ಪಡೆದು ಕಾಮಗಾರಿ ಆರಂಭಿಸಿದ ಜೈನ್ ಇರಿಗೇಶನ್ ಕಂಪನಿಯವರು ಸುಮಾರು 4ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಮಾಡುತ್ತಿರುವದಲ್ಲದೆ ಜನರಿಗೆ ನಿರಂತರ ನೀರು ಒದಗಿಸಲು ವಿಫಲರಾಗಿದ್ದಾರೆ. 4ಜೋನಗಳಲ್ಲಿ 50% ದಷ್ಟು ಕಾಮಗಾರಿಯಾಗಿದ್ದು ಮನೆಗಳಿಗೆ ಜೋಡನೆಯಾದ ನಲ್ಲಿಗಳಲ್ಲಿ ಮಣ್ಣು ಮಿಶ್ರೀತ ನೀರು ಸರಬಾರು ಆಗುತ್ತಿದೆ ಎಂದರು.
ಈ ಕಾಮಗಾರಿಯು ಅವೈಜ್ಞಾನಿಕವಾಗಿರುವದರಿಂದ ಪೈಪ್ಗಳಲ್ಲಿ ಗಾಳಿ ತುಂಬಿ ಮನೆಗಳಿಗೆ ಜೋಡಿಸಿದ ನಲ್ಲಿಗಳಲ್ಲಿ ಗಾಳಿ ಪ್ರೇಷರ್ನಿಂದ ನೀರು ಬಾರದೇ ಮೀಟರಗಳು ಸತತವಾಗಿ ತಿರುಗುತ್ತಿವೆ. ಹೀಗಾಗಿ ನೀರಿನ ಕರ ಮಾಸಿಕವಾಗಿ ಸಾವಿರಕ್ಕೂ ಹೆಚ್ಚು ಮೊತ್ತದ ಬಿಲ್ಲು ಬರುತ್ತಿದ್ದು ಸಾರ್ವಜನಿಕರು ನೀರಿನ ಕರ ತುಂಬಲು ಹಿಂದೇಟು ಹಾಕುತ್ತಿದ್ದಾರೆ. ನೀರಿನ ಕರಸ ಹೆಸರಿನಲ್ಲಿ ಸಾರ್ವಜನಿಕರಿಂದ 24/7 ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಹಣ ವಸೂಲಿಗಿಳಿದ್ದಾರೆಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅವೈಜ್ಞಾನಿಕವಾಗಿ ಕೂಡಿದ 24/7 ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಈ ಕೂಡಲೆ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಜೈನ್ ಇರಿಗೇಶನ್ ಕಂಪನಿಯವರನ್ನು ಕೈಬಿಟ್ಟು ನಗರಸಭೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಜೈನ್ ಇರಿಗೇಶನ್ ಕಂಪನಿ ವಿರುದ್ಧ ಉಗ್ರ ಹೋರಾಟ ಮಾಡಲು ಅನಿವಾರ್ಯವಾಗುತ್ತದೆ ಎಂದರು.