RNI NO. KARKAN/2006/27779|Monday, June 16, 2025
You are here: Home » breaking news » ನಿಪ್ಪಾಣಿ:ನಗರಸಭೆ ಸದಸ್ಯನಿಂದ ಅನ್ಯಾಯ : ನಿಪ್ಪಾಣಿ ನಗರ ಸಭೆ ಎದುರು ಯುವಕನಿಂದ ಅರೆಬೆತ್ತಲೆ ಪ್ರತಿಭಟನೆ

ನಿಪ್ಪಾಣಿ:ನಗರಸಭೆ ಸದಸ್ಯನಿಂದ ಅನ್ಯಾಯ : ನಿಪ್ಪಾಣಿ ನಗರ ಸಭೆ ಎದುರು ಯುವಕನಿಂದ ಅರೆಬೆತ್ತಲೆ ಪ್ರತಿಭಟನೆ 

ನಗರಸಭೆ ಸದಸ್ಯನಿಂದ ಅನ್ಯಾಯ : ನಿಪ್ಪಾಣಿ ನಗರ ಸಭೆ ಎದುರು ಯುವಕನಿಂದ ಅರೆಬೆತ್ತಲೆ ಪ್ರತಿಭಟನೆ

 

ನಿಪ್ಪಾಣಿ ಜೂ 23: ನಿಪ್ಪಾಣಿ ನಗರಸಭೆ ಎದುರುಗಡೆ ಯುವಕನೊರ್ವ ಬೇವಿನ ತಪ್ಪಲು ಸುತ್ತಿಕೊಂಡು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ನಗರದಲಿಂದು ನಡೆದಿದೆ.

ತನ್ನ ಮನೆಯ ಬಳಿಯ ಸರ್ಕಾರಿ ಜಾಗದಲ್ಲಿ ಉದ್ದೇಶಪೂರ್ವಕವಾಗಿ ತ್ಯಾಜ್ಯ ಸುರಿಯುತ್ತಿರುವುದಾಗಿ ಆರೋಪಿಸಿ ಶುಭಂ ಸುಖಿ ಎಂಬಾತ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾನೆ. 

ನಗರಸಭೆ ಸದಸ್ಯ ಸಂಜಯ ಸಾಂಗಾವಕರನಿಂದ ತನಗೆ ಅನ್ಯಾಯವಾಗಿದೆ ಎಂದು ಯುವಕ ಆರೋಪಿಸಿದ್ದಾನೆ. ಪ್ರತಿಭಟನೆಗೆ ಸ್ಥಳೀಯ ಸಂಘ ಸಂಸ್ಥೆಗಳು ಬೆಂಬಲ ‌ಸೂಚಿಸಿವೆ.

ನಿಪ್ಪಾಣಿ ನಗರಠಾಣೆ ಪಿಎಸ್ಐ ಪ್ರತಿಭಟನೆ ನಡೆಸುತ್ತಿದ್ದ ಯುವಕನನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆಂದು ತಿಳಿದು ಬಂದಿದೆ

Related posts: