RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ 

ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ

ಮೂಡಲಗಿ ಅ 20 : ನೂರಾರು ಧರ್ಮ-ಜಾತಿಗಳಿದ್ದರೂ ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡಿರುವ ರಾಷ್ಟ್ರ ಯಾವುದಾದರೂ ಇದ್ದರೆ ಅದು ನಮ್ಮ ಭಾರತ ಎಂದು ಹೆಮ್ಮೆಯಾಗುತ್ತದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುರ್ಗಾದೇವಿ ಮತ್ತು ಮರಗವ್ವದೇವಿ ದೇವಸ್ಥಾನ, ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಪ್ರಪಂಚದಲ್ಲಿ ನಮ್ಮ ದೇಶ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕಳೆದ ಚುನಾವಣೆಯಲ್ಲಿ ಸತತ 5ನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಲು ಮತ ನೀಡಿ ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಆಯ್ಕೆ ಮಾಡಿದ್ದಕ್ಕಾಗಿ ಅಭಿನಂದಿಸಿದರು.
ಪ್ರತಿ ಚುನಾವಣೆಗೊಮ್ಮೆ ಕೆಲವರು ಬಂದು ಸುಳ್ಳು ಭರವಸೆಗಳನ್ನು ನೀಡುತ್ತ ಜನರನ್ನು ಮರಳು ಮಾಡುತ್ತಿರುತ್ತಾರೆ. ಅಂತಹವರ ವದಂತಿಗಳನ್ನು ಯಾವುದಕ್ಕೂ ನಂಬಬೇಡಿ. ನಿಮ್ಮ ಹಿತಕ್ಕಾಗಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ದುಡಿಯುತ್ತಿರುವ ನನಗೆ ನಿಮ್ಮ ಪ್ರೀತಿ-ವಿಶ್ವಾಸವೇ ಮುಖ್ಯವಾಗಿದೆ. ಅರಭಾವಿ ಕ್ಷೇತ್ರವನ್ನು ಮಾದರಿಯಾಗಿ ಪರಿವರ್ತಿಸಲಿಕ್ಕೆ ಜನತೆಯ ಸಹಕಾರ ಅಗತ್ಯವೆಂದು ಕೋರಿದರು.
ಯಾದವಾಡ ಗ್ರಾಮದ ಅಭ್ಯುದಯಕ್ಕೆ ಈ ಭಾಗದಲ್ಲಿ ಯುವಕರಿಗೂ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಕಾರ್ಖಾನೆಗಳು ಇರುವುದರಿಂದ ನಿರುದ್ಯೋಗ ಸಮಸ್ಯೆ ಸ್ಪಲ್ಪ ಮಟ್ಟಿಗೆ ನಿವಾರಣೆಯಾಗಿದೆ. ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹಿರಿಯರೊಂದಿಗೆ ಯುವಕರು ಸಹ ಗ್ರಾಮಾಭಿವೃದ್ಧಿಗೆ ಟೊಂಕುಕಟ್ಟಿ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸ್ಥಳೀಯ ಚೌಕಿ ಮಠದ ಪ್ರಭುಲಿಂಗ ಮಹಾಸ್ವಾಮಿಗಳು ವಹಿಸಿ ಆಶಿರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಗಣಿ ಉದ್ಯಮಿ ಶಿವಪ್ಪಗೌಡ ನ್ಯಾಮಗೌಡ ವಹಿಸಿದ್ದರು.
ವೇದಿಕೆಯಲ್ಲಿ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಗ್ರಾಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಗ್ರಾಪಂ ಉಪಾಧ್ಯಕ್ಷೆ ಭಾರತಿ ದಳವಾಯಿ, ಮುಖಂಡರಾದ ಮಲ್ಲಪ್ಪ ಚಕ್ಕೆನ್ನವರ, ಹನಮಂತ ಹುಚರಡ್ಡಿ, ಗೌಡಪ್ಪ ಗುರಡ್ಡಿ, ಬೀರಪ್ಪ ಮುಗಳಖೋಡ, ಶಿವನಗೌಡ ಪಾಟೀಲ, ಶ್ರೀಶೈಲ ಭಜಂತ್ರಿ, ನಿಂಗನಗೌಡ ಪಾಟೀಲ, ಕುತಬುದ್ದಿನ ತಹಶೀಲ್ದಾರ, ಶ್ರೀಶೈಲ ಭಜಂತ್ರಿ, ಬಸಪ್ಪ ಪೂಜೇರಿ, ಸದಾಶಿವ ದುರಗನ್ನವರ, ಅಮೀನಸಾಬ ಯಳ್ಳೂರ, ಬಸು ಹಿಡಕಲ್, ಸುರೇಶ ಸಾವಳಗಿ, ಪರಸಪ್ಪ ರಾಮೋಜಿ, ಮುಂತಾದವರು ಉಪಸ್ಥಿತರಿದ್ದರು.

Related posts: