ಘಟಪ್ರಭಾ:ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರವೇ ಆಗ್ರಹ
ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರವೇ ಆಗ್ರಹ
ಘಟಪ್ರಭಾ ಸೆ 26 : ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಘಟಕದ ಕಾರ್ಯಕರ್ತರು ಬುಧವಾರದಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮೀಪದ ಧುಪದಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಟ್ಟಿಮನಿ ಆಸ್ಪತ್ರೆಯ ಎದುರಗಡೆ ಇರುವ ಅರಣ್ಯ ಇಲಾಖೆಯ ಮರಗಳನ್ನು ಪರವಾನಗಿ ಇಲ್ಲದೇ ಅಕ್ರಮವಾಗಿ ಕಡಿಯುತ್ತಿದ್ದು ಅದನ್ನು ಶೀಘ್ರದಲ್ಲಿ ಅರಣ್ಯ ಇಲಾಖೆಯವರು ಬಂದ್ ಮಾಡಿ ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೆಹಮಾನ್ ಮೊಕಾಶಿ, ರವಿ ನಾಂವಿ, ಅಜೀತ್ ಮಲ್ಲಾಪೂರ, ಅಮೀರ್ ಜಗದಾಳ, ಲಗಮಣ್ಣ ಗಾಡಿವಡ್ಡರ,ರಾಜು ಗಾಡಿವಡ್ಡರ, ಮೀರಾಸಾಬ ಬಳಿಗಾರ, ಲಾಲಸಾಬ ಜಗದಾಳ, ಪವನ ರಜಪೂತ, ಮಾನಿಂಗ ಸನದಿ, ಸುನೀಲ ಕೊಟಬಾಗಿ, ಸತೀಶ ಪಾಟೀಲ, ಪ್ರಕಾಶ ಮುತ್ತೇಪ್ಪಗೋಳ, ಸುಭಾಷ ಮೇತ್ರಿ, ಸಂದೇಶ ರಜಪೂತ, ರಾಘು ಗಾಡಿವಡ್ಡರ, ಶಂಕರ ಗಾಡಿವಡ್ಡರ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.