ಗೋಕಾಕ:ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ : ನಿಂಗೌಡ ಪಾಟೀಲ
ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ : ನಿಂಗೌಡ ಪಾಟೀಲ
ಗೋಕಾಕ ಸೆ 8 : ಗ್ರಾಮೀಣ ನೆಲದ ಪ್ರತಿಭೆಗಳಿಗೆ ಅವಕಾಶ ನೀಡಿ ದೇಶೀಯ ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ ಎಂದು ಮಾಸ್ತಿಹೊಳಿ ಹಿರಿಯ ಜಾನಪದ ಕಲಾವಿದ ನಿಂಗೌಡ ಪಾಟೀಲ ಹೇಳಿದರು.
ಅವರು ಸ್ಥಳೀಯ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯ ಬಿಂದು, ಲಲಿತ ಕಲೆ ಹಾಗೂ ಜಾನಪದ ಅಧ್ಯಯನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕರಕುಶಲ ಕಲಾತರಬೇತಿ ಕಾರ್ಯಗಾರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮಾತನಾಡುತ್ತಾ ಶ್ರಮದಿಂದ ರೂಢಿಸಿಕೊಂಡ ಕಲೆಯುವ ಬದುಕಲ್ಲಿ ಯಶಸ್ಸನ್ನು ತಂದುಕೊಡುವುದರೊಂದಿಗೆ ಮನಸ್ಸಲ್ಲಿ ಏಕಾಗ್ರತೆ ಮೂಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಶ್ರೀ ಜಯಾನಂದ ಮಾದರ ಶೃದ್ದೆ ಭಕ್ತಿಯಿಂದ ಗಳಿಸಿದ ವಿದ್ಯೆ ಬದುಕಲ್ಲಿ ಬೆಳಕು ನೀಡುತ್ತದೆ. ವಿದ್ಯಾರ್ಥಿಗಳಾದವರು ವಿನಯ, ವಿವೇಕ, ವಿಧೇಯತೆಯಿಂದ ನಡೆದುಕೊಳ್ಳುತ್ತಾ ಶಿಸ್ತು ಸ್ವಚ್ಛತೆ ಆರೋಗ್ಯದತ್ತ ಗಮನ ನೀಡಬೇಕೆಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಬದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಲಾ ಶಿಕ್ಷಕ ಶ್ರೀ ಸದಾನಂದ ಗಾಯಕವಾಡ ಸಮಾರೋಪ ನುಡಿಗಳನ್ನಾಡಿದರು. ಕೃಷಿ ಅಧಿಕಾರಿ ಶ್ರೀ ಸುಭಾಷ ಕಾಂಬಳೆ ಧೈಹಿಕ ಶಿಕ್ಷಕ ಶ್ರೀ ಅಶೋಕ ಬಾರಿಗಿಡದ ಉಪಸ್ಥಿತರಿದ್ದರು. ಶ್ರೀ ರಮೇಶ ಸುಲದಾಳ, ಶ್ರೀ ಮಲ್ಲಿಕಾರ್ಜುನ ಪುಂಜವ್ವಗೋಳ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು.
ಶ್ರೀ ಬಾಳಗೌಡ ಪಾಟೀಲ ಪ್ರಾರ್ಥಿಸಿದರು. ಉಪನ್ಯಾಸಕಿ ಕು. ಮಲ್ಲಮ್ಮ ದಳವಾಯಿ ಸ್ವಾಗತಿಸಿದರು. ಅಧ್ಯಾಪಕಿ ಕು. ಮೊನಿಕಾ ಹಲವಾಯಿ ನಿರುಪಿಸಿ ವಂದಿಸಿದರು.