ಗೋಕಾಕ:ಗೋಸಬಾಳದಲ್ಲಿ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಸಂಪನ್ನ
ಗೋಸಬಾಳದಲ್ಲಿ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಸಂಪನ್ನ
ಬೆಟಗೇರಿ ಸೆ 4 : ಸಮೀಪದ ಗೋಸಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಗುರುವಾರ ಆ.30 ರಿಂದ ಸೋಮವಾರ ಸೆ.3 ರ ತನಕ ಸಂಭ್ರಮದಿಂದ ಜರುಗಿತು.
ಆ.30 ರಂದು ಬೆಳಗ್ಗೆ 8 ಗಂಟೆಗೆ ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಓಂಕಾರ ಸಪ್ತಾಹ ಸಕಲ ಪೂಜೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಸಂಜೆ 7 ಗಂಟೆಗೆ ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಪ್ರವಚನ ನಡೆಯಿತು.
ಆ.31ರಂದು ಸಂಜೆ 7 ಗಂಟೆಗೆ ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮಿಜಿ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಪ್ರವಚನ ಕಾರ್ಯಕ್ರಮ, ಸೆ.1ರಂದು ಸಂಜೆ 7ಗಂಟೆಗೆ ಗೋಕಾಕದ ಸುವರ್ಣಾತಾಯಿ ಹೊಸಮಠ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಪ್ರವಚನ ಜರುಗಿತು.
ಸೆ.2 ರಂದು ಸಂಜೆ7ಗಂಟೆಗೆ ಚಿಪ್ಪಲಕಟ್ಟಿ-ಸಾಲಹಳ್ಳಿ ಬ್ರಹನ್ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಜಿ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಪ್ರವಚನ, ಸೆ.3 ರಂದು ಸಂಜೆ 7 ಗಂಟೆಗೆ ಗುಬ್ಬಲಗುಡ್ಡ ಕೆಂಪಯ್ಯ ಅಜ್ಜನವರ ಮಠದ ಶ್ರೀಗಳ ಪಾದಪೂಜೆ, ಸತ್ಕಾರ ಸಮಾರಂಭ, ಪ್ರವಚನ, ಲಿಂ.ಶಿವಾನಂದ ಸ್ವಾಮಿಜಿ ಭಾವಚಿತ್ರದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ವೈಭವದಿಂದ ನಡೆಯಿತು.
ನಂದಿಕುರಳಿಯ ಮಹಾದೇವಪ್ಪ ಪೂಜೇರಿ ಅವರಿಂದ ಆ.30 ರಿಂದ ಸೆ.3ರತನಕ ಪ್ರತಿದಿನ ಸಾಯಂಕಾಲ 6ಗಂಟೆಗೆ ಪ್ರವಚನ ಆಯೋಜಿಸಲಾಗಿತ್ತು. ಸ್ಥಳೀಯ ಬಲಭೀಮ ದೇವಸ್ಥಾನದಲ್ಲಿ ಮಹಾಪ್ರಸಾದ ನಡೆದು 19ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಸಂಪನ್ನಗೊಂಡಿತು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ರಾಜಕೀಯ ಮುಖಂಡರು, ಭಕ್ತರು, ಇಲ್ಲಿಯ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಸಪ್ತಾಹ ಹಾಗೂ ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.