ಗೋಕಾಕ:ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ : ಜಿ.ಎಸ್.ಮಳಗಿ
ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ : ಜಿ.ಎಸ್.ಮಳಗಿ
ಗೋಕಾಕ ಅ 15 : ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ತಹಶೀಲ್ದಾರ್ ಜಿ.ಎಸ್ ಮಳಗಿ ಹೇಳಿದರು
ಬುಧವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 72 ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ಮಾಡಿ ಮಾತನಾಡಿದರು
ದೇಶವನ್ನು ಆಕ್ರಮಿಸಿಕೊಂಡಿದ ಬ್ರಿಟಿಷರ ದಬ್ಬಾಳಿಕೆ , ಅಟ್ಟಹಾಸ , ಹಿಂಸೆಗಳನ್ನು ಸ್ವಾತಂತ್ರ್ಯ ಹೋರಾಟಗಾರರು ಸಹಿಸಿಕೊಂಡು ಅವರ ವಿರುದ್ಧ ಹೋರಾಡಿದ ಪರಿಣಾಮ ಭಾರತ ದೇಶ ಸ್ವತಂತ್ರ ರಾಷ್ಟ್ರವಾಗಿ ರೂಪಗೊಳ್ಳಲು ಸಾಧ್ಯವಾಗಿದೆ
ಭಗತಸಿಂಗ್ , ರಾಜಗುರು , ಸುಖದೇವ ಹಾಗೂ ಸಾವರಕರ ಸೇರಿದಂತೆ ಮುಂತಾದ ಕ್ರಾಂತಿ ಕಾರಿ ಹೋರಾಟಗಾರರು ನಮ್ಮಗಿಲ್ಲಾ ಆರ್ದಶ ಅವರು ತಮ್ಮ ಸರ್ವಸ್ವಸವನ್ನೇ ತ್ಯಜಿಸಿ ದೇಶಕ್ಕಾಗಿ ತಾರುಣ್ಯದಲ್ಲಿಯೇ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಪ್ಪಟ ದೇಶ ಪ್ರೇಮಿಗಳಾಗಿದ್ದಾರೆ ಅವರ ಹಾಕಿ ಕೋಟ್ಟ ಮಾರ್ಗದಲ್ಲಿ ನಾವಿಂದು ಮುನ್ನಡೆಯಬೇಕು ಎಂದು ತಹಶೀಲ್ದಾರ್ ಮಳಗಿ ಸ್ವಾತಂತ್ಯ್ರೋತ್ಸವದ ಸಂದೇಶ ನೀಡಿದರು
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ , ಡಿವೈಎಸ್ಪಿ ಡಿ.ಟಿ ಪ್ರಭು , ಸಿಪಿಐ ತವನಪ್ಪಗೋಳ , ಬಿಜೆಪಿ ಮುಖಂಡ ಅಶೋಕ ಪೂಜಾರಿ , ಶಿಕ್ಷಣಾಧಿಕಾರಿ ಡಿ.ಎಸ್ ಕುರ್ಲಕಣಿ , ಪೌರಾಯುಕ್ತ ಎಂ.ಎಚ್ ಅತ್ತಾರ , ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನವರ , ಕಿರಣ ಢಮಾಮಗರ , ಎಸ್.ಎ.ಕೋತವಾಲ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು