ಘಟಪ್ರಭಾ:ಮಠಾಧೀಶರ ಸಂಘದಿಂದ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಹುಟ್ಟು ಹಬ್ಬ ಆಚರಣೆ
ಮಠಾಧೀಶರ ಸಂಘದಿಂದ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಹುಟ್ಟು ಹಬ್ಬ ಆಚರಣೆ
ಘಟಪ್ರಭಾ ಜು 21 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಹುಟ್ಟು ಹಬ್ಬವನ್ನು ಗೋಕಾಕ ತಾಲೂಕಿನ ಮಠಾಧೀಶರ ಸಂಘದ ವತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವರು, ಬಾಗೋಜಿಕೊಪ್ಪ ಶ್ರೀಗಳು, ಸುಣಧೋಳಿಯ ಶ್ರೀಗಳು, ಹೊಸಯರಗುದ್ರಿಯ ಶ್ರೀಗಳು, ಕಪರಟ್ಟಿಯ ಬಸವರಾಜ, ಸೇರಿದಂತೆ ಶ್ರೀಮಠದ ಸದ್ಭಕ್ತರು ಇದ್ದರು.
