RNI NO. KARKAN/2006/27779|Sunday, June 15, 2025
You are here: Home » breaking news » ಮೂಡಲಗಿ:ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು : ಮಹಾಲಿಂಗ ಮಂಗಿ

ಮೂಡಲಗಿ:ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು : ಮಹಾಲಿಂಗ ಮಂಗಿ 

ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು : ಮಹಾಲಿಂಗ ಮಂಗಿ

ಮೂಡಲಗಿ ಜು ,19 : ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು, ಕೂತುಹಲಪೂರ್ಣವಾದ ಸಂಕೀರ್ಣ ಮಾಧ್ಯಮವಾಗಿದೆ’ ಎಂದು ಗೋಕಾಕದ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು.
ಇಲ್ಲಿಯ ಆರ್‍ಡಿಎಸ್ ಪದವಿ ಮಹಾವಿದ್ಯಾಲಯದಲ್ಲಿ ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ಸಿರಿಗನ್ನಡ ಮಹಿಳಾ ವೇದಿಕೆಗಳು ಆಯೋಜಿಸಿದ “ತಿಂಗಳ ಕವಿ ಸಮಯ-ಕಾವ್ಯದರ್ಶ ಕಾರ್ಯಕ್ರಮದ ಅಧ್ಯಕ್ಷತೆವಹಹಿಸಿ ಮಾತನಾಡಿದ ಅವರು ಕಾವ್ಯ ರಚನೆಯು ಕವಿಯ ಅಂತರಂಗದ ಖುಷಿಯ ಸಂಗತಿಯಾಗಿದೆ ಎಂದರು. ಹೊಸ ಪ್ರತಿಭೆಗಳಿಗೆ ಸಾಹಿತ್ಯ ವೇದಿಕೆಗಳು ಅವಕಾಶಗಳನ್ನು ನೀಡುವುದರ ಮೂಲಕ ಕಾವ್ಯ ಪರಂಪರೆಯನ್ನು ಬೆಳಸುವುದು ಅವಶ್ಯವಿದೆ. ಯುವಕವಿ ಪೀಳಿಗೆಯನ್ನು ಬೆಳೆಸುವುದು ಅವಶ್ಯವಿದೆ ಎಂದರು.
ಸಂಘಟನೆಯ ಸಂಚಾಲಕಿ ರಜನಿ ಜಿರಗ್ಯಾಳ ಮಾತನಾಡಿ ಕಳೆದ ಒಂದು ವರ್ಷದಿಂದ ಕವಿಗಳ ಕೃತಿಗಳ ಪರಿಚಯ ಮಾಡುವ ಮೂಲಕ ಕವಿಗಳನ್ನು ಬೆಳಕಿಗೆ ತರುವ ಕೆಲಸವನ್ನು ಮಾಡುತ್ತಿದ್ದು, ಈ ಬಾರಿ ಗೋಕಾಕದಿಂದ ಮೂಡಲಗಿ ಸ್ಥಳಕ್ಕೆ ಇಂಥ ಕಾರ್ಯಕ್ರಮವನ್ನು ಮಾಡುವ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಮುಖ್ಯ ಅತಿಥಿ ನಿವೃತ್ತ ಪ್ರಾಚಾರ್ಯ ಪ್ರೊ. ಈಶ್ವರ ಮುರಕಟ್ನಾಳ ಮಾತನಾಡಿದರು.
ಕವಿ ಡಾ. ಮಹಾದೇವ ಜಿಡ್ಡಿಮನಿ ಹಾಗೂ ಮಕ್ಕಳ ಸಾಹಿತಿ ಮುರಗೇಶ ಗಾಡವಿ ಅವರು ತಮ್ಮ ಕವಿತೆಗಳನ್ನು ವಾಚಿಸಿದರು.
ಡಾ. ಮಹಾದೇವ ಜಿಡ್ಡಿಮನಿ ಅವರ ತ್ರಿಪದಿ ‘ಭ್ರಾತೃಸಂಮಿತಿ’ ಕೃತಿ ಕುರಿತು ಬಾಲಶೇಖರ ಬಂದಿ ಹಾಗೂ ಮುರಗೇಶ ಗಾಡವಿ ಅವರ ಮಕ್ಕಳ ಕವನ ಸಂಕಲನ ‘ಹೂವಾಗಿ ಅರಳಿಸಿ ನಮ್ಮನ್ನು’ ಕೃತಿ ಕುರಿತು ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿದರು.
ಆರ್‍ಡಿಎಸ್ ಸಂಸ್ಥೆ ಅಧ್ಯಕ್ಷ ಸಂತೋಷ ಪಾರ್ಶಿ ಅತಿಥಿಯಾಗಿದ್ದರು.
ಹಿರಿಯ ಕವಯತ್ರಿ ಶಕುಂತಲಾ ದಂಡಗಿ, ಪುಷ್ಪಾ ಮುರಗೋಡ, ಸಿರಿಗನ್ನಡ ಮಹಿಳಾ ವೇದಿಕೆ ಸಂಗೀತಾ ಬನ್ನೂರ, ಶಬ್ಬಿರ ಡಾಂಗೆ, ಸಿದ್ದು ಮಹಾರಾಜ, ಚಿದಾನಂದ ಹೂಗಾರ, ಮಹೆಬೂಬ ಶೇಖಬಡೆ, ಶಿವರಾಜ ಕಾಂಬಳೆ, ಬಸವರಾಜ ಭಜಂತ್ರಿ, ಸುರೇಶ ಲಂಕೆಪ್ಪನ್ನವರ, ಶಿವಾನಂದ ಸತ್ತಿಗೇರಿ, ಮಹೇಶ ಕುಂಬಾರ, ಸಿ.ಎಂ. ಹಂಜಿ, ಆರ್.ಎಂ. ಕಾಂಬಳೆ, ಐ.ಎ. ಪಾಟೀಲ, ಫಯಾಜ್‍ಖಾನ, ಭೀಮಪ್ಪ ಬಡಸ, ಇದ್ದರು.
ರಾಜೇಶ್ವರಿ ಹಿರೇಮಠ ಪ್ರಾರ್ಥಿಸಿದರು, ಶೈಲಜಾ ಕೊಕ್ಕರಿ ಸ್ವಾಗತಿಸಿದರು, ರಾಜೇಶ್ವರಿ ಒಡೆಯರ ನಿರೂಪಿಸಿದರು.

Related posts: