RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ :ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ

ಗೋಕಾಕ :ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ 

ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಜೋಡೆತ್ತುಗಳನ್ನು ಶೃಂಗರಿಸಿ ಪೂಜೆ ನೇರವೆರಿಸಿ ಊರಿನ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಎತ್ತುಗಳನ್ನು ಓಡಿಸಲಾಯಿತು.

ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ

ಬೆಟಗೇರಿ ಜೂ 28 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ಜೂನ 28 ರಂದು ಕಾರ ಹುಣ್ಣಿಮೆ ಪ್ರಯುಕ್ತ ಜೋಡೆತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿ ಇಲ್ಲಿಯ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಎತ್ತುಗಳನ್ನು ಓಡಿಸಿ, ಸ್ಥಳೀಯರು ಸಂಭ್ರಮದಿಂದ ಕಾರಹುಣ್ಣಿಮೆಯನ್ನು ಆಚರಿಸಿದರು.
ಗುರುವಾರ ದಿನ ಗ್ರಾಮದ ಎಲ್ಲ ರೈತರ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಿ, ಗ್ರಾಮದ ಪುರ ದೇವರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ, ನೈವೆದ್ಯ ಅರ್ಪನೆ ಕಾರ್ಯಕ್ರಮ ಪುರಜನರಿಂದ ಸಡಗರದಿಂದ ನಡೆಯಿತು.
ಗ್ರಾಮದ ರೈತರು ತಮ್ಮ ಮುಂಗಾರು, ಹಿಂಗಾರೂ ಹಂಗಾಮಿನ ಎರಡು ಎತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿ ಗ್ರಾಮದ ಅಗಸಿಯ ಹೆಬ್ಬಾಗಿಲಲ್ಲಿ ಕರಿ ಹರಿದ ಬಳಿಕ ಯುವಕರು ಒಬ್ಬರಿಗಿಂತ ಮತ್ತೂಬ್ಬರು ಮೇಲಕ್ಕೆ ಹಾರಿ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿದ ಕರಿಯನ್ನು ಹರಿಯಲು ಹರಸಾಹಸ ಮಾಡುತ್ತಿದ್ದರೆ ನೋಡುಗರಿಗೆ ಮನರಂಜನೆ ನೀಡುವಂತಿತ್ತು.
ಹಿಂದಿನಿಂದಲೂ ಗ್ರಾಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಕಾರ ಹುಣ್ಣಿಮೆ ದಿನ ಸಂಪ್ರದಾಯದಂತೆ ಎತ್ತುಗಳಿಗೆ ವಿವಿಧ ಬಗೆಯ ಬಣ್ಣಹಚ್ಚಿ ಕೊಡುಗಳಿಗೆ ರಿಬ್ಬನ್, ಗೆಜ್ಜೆಯ ಸರ, ಹಣೆಪಟ್ಟಿ ಕಟ್ಟಿ ಶೃಂಗರಿಸಲಾಗಿತ್ತು. ಸ್ಥಳೀಯ ದೇಯನ್ನವರ ಹಾಗೂ ಸೋಮನಗೌಡರ ಮನೆತನದ ಎತ್ತುಗಳನ್ನು ಕರಿಹರಿಯಲಾಯಿತು.
ಸೋಮನಗೌಡರ ಮನೆತನದ ಹಿಂಗಾರು ಎತ್ತು ಮುಂದಾಗಿ ಓಡಿತು. ಈ ಸಲ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳ ಬೆಳೆಯುವ ಕುರಿತು ಸ್ಥಳೀಯ ರೈತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ತಮ್ಮ ಮನೆ ಕಡೆಗೆ ಹಜ್ಜೆ ಹಾಕಿದರು.
ರಾಮಣ್ಣ ಬಳಿಗಾರ, ಮುತ್ತೆಪ್ಪ ವಡೇರ, ಲಕ್ಷ್ಮಣ ಸೋಮನಗೌಡರ, ಎಮ್.ಐ.ನೀಲಣ್ಣವರ, ಈರಯ್ಯ ಹಿರೇಮಠ, ರಾಜು ಪತ್ತಾರ, ಸಿದ್ದು ದೇಯಣ್ಣವರ, ಬಸನಗೌಡ ದೇಯಣ್ಣವರ, ಬಸಪ್ಪ ದೇಯಣ್ಣವರ, ಲಕ್ಷ್ಮಣ ಚಂದರಗಿ, ಸ್ಥಳೀಯ ಯುವಕರು, ರೈತರು, ಮಹಿಳೆಯರು, ವಯೋವೃದ್ಧರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಈ ಕಾರಹುಣ್ಣಿಮೆಯ ಕರಿ ಹರಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts: