RNI NO. KARKAN/2006/27779|Saturday, June 14, 2025
You are here: Home » breaking news » ಮೂಡಲಗಿ:ತ್ವರೀತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಮೂಡಲಗಿ:ತ್ವರೀತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ 

ಕುಸಿತಕ್ಕೊಳಗಾದ ಧರ್ಮಟ್ಟಿ ಸೇತುವೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪರಿಶೀಲನೆ ನಡೆಸಿದರು.

ತ್ವರೀತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಮೂಡಲಗಿ ಜೂ 26 : ವಾರದೊಳಗೆ ಮಸಗುಪ್ಪಿ-ಮೂಡಲಗಿ ರಸ್ತೆಗೆ ಅಂಟಿಕೊಂಡಿರುವ ಧರ್ಮಟ್ಟಿ ಹಳ್ಳದ ಸೇತುವೆಯ ಕಾಮಗಾರಿಯನ್ನು ಕೈಗೊಂಡು ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಸಗುಪ್ಪಿ-ಮೂಡಲಗಿ ಮಾರ್ಗಮದ್ಯ ಧರ್ಮಟ್ಟಿಯಲ್ಲಿರುವ ಹಳ್ಳದ ಸೇತುವೆಯು ಕುಸಿತಕ್ಕೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಧರ್ಮಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಜನರಿಗೆ ಅನುಕೂಲವಾಗುವಂತೆ ತ್ವರೀತಗತಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.
60 ಲಕ್ಷ ರೂ. ಅನುದಾನ : ಧರ್ಮಟ್ಟಿ ಸೇತುವೆಯ ತಡೆಗೋಡೆ ಕುಸಿದಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯು ಮೂಡಲಗಿ ತಾಲೂಕಿನ ಮುಖ್ಯ ರಸ್ತೆಗಳಲ್ಲಿ ಒಂದಾಗಿದ್ದು, ಮಸಗುಪ್ಪಿ, ಜೋಕಾನಟ್ಟಿ, ಗುಜನಟ್ಟಿ, ಧರ್ಮಟ್ಟಿ ಹಾಗೂ ಇನ್ನೂ ಅನೇಕ ಗ್ರಾಮಗಳ ಸಾರ್ವಜನಿಕರಿಗೆ ಸಂಪರ್ಕ ರಸ್ತೆಯಾಗಿದೆ. ಈ ಕಾಮಗಾರಿಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ನೀರಾವರಿ ಇಲಾಖೆಯಿಂದ ಈ ಕಾಮಗಾರಿಗೆ ಅನುದಾನ ಬಿಡುಗಡೆಯಾಗಲಿದೆ. ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ ಧರ್ಮಟ್ಟಿ ಸೇತುವೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಪರಶುರಾಮ ಸನದಿ, ಲಕ್ಷ್ಮಣ ತೆಳಗಡೆ, ಲಗಮಣ್ಣಾ ಕುಟ್ರಿ, ಲಕ್ಕಪ್ಪ ತೆಳಗಡೆ, ಶ್ರೀಕಾಂತ ದೇಸಾಯಿ, ಮಹಾದೇವ ಬಡ್ಡಿ, ಬನಪ್ಪ ಕೊರಕಪೂಜೇರಿ, ಸಾಬಪ್ಪ ಬಂಡ್ರೊಳ್ಳಿ, ಭರಮಪ್ಪ ಆಶಿರೊಟ್ಟಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: