RNI NO. KARKAN/2006/27779|Sunday, June 1, 2025
You are here: Home » breaking news » ಗೋಕಾಕ:ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ

ಗೋಕಾಕ:ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ 

ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ

ಗೋಕಾಕ ಮೇ 23 : ಚುಟುಕು ಸಾಹಿತ್ಯ ಪರಿಷತ್ತು ಗೋಕಾಕ ತಾಲ್ಲೂಕು ಘಟಕ ಮತ್ತು ಗೋಕಾವಿ ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ನಾಳೆ ಶನಿವಾರದಂದು ಸಂಜೆ 4 ಘಂಟೆಗೆ ನಗರ ಬಸ್ಸ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ವಿವೇಕಾನಂದ ಯೋಗ ಕೇಂದ್ರದ ಸಭಾಂಗಣದಲ್ಲಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಜರುಗಲಿದೆ.
ಹಿರಿಯ ಸಾಹಿತಿ ಡಾ.ಲಕ್ಷ್ಮಣ ಚೌರಿ ಅಧ್ಯಕ್ಷತೆವಹಿಸಲಿದ್ದು, ಹಾರೂಗೇರಿ ಹಿಡಕಲ್ ನ ಶಿಕ್ಷಕ ಹಾಗೂ ಚಿಂತಕರಾದ ಶಂಕರ ಕ್ಯಾಸ್ತಿ ಗೋಕಾವಿ ನೆಲದ ಚುಟುಕು ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ.ಹಿರಿಯ ಚುಟುಕು ಕವಿ ಗೋಪಾಲ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು,ಹಿರಿಯ ಸಾಹಿತಿ ಹಾಗೂ ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿ, ಶಿಕ್ಷಕ,ಕವಿ ಈಶ್ವರ ಮಮದಾಪೂರ ಮತ್ತು ಶಿಕ್ಷಕ ಅರುಣ ಅಕ್ಕಿ ಸಂವಾದ ನಡೆಸಲಿದ್ದಾರೆ.ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆನಂದ ಸೋರಗಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related posts: