ಗೋಕಾಕ:ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಅಭಿಮಾನಿಗಳಿಂದ ವಿಜಯೋತ್ಸವ

ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಅಭಿಮಾನಿಗಳಿಂದ ವಿಜಯೋತ್ಸವ
ಗೋಕಾಕ ಜೂ 6 : ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಬುಧವಾರದಂದು ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಇಲ್ಲಿಯ ಶ್ರೀ ಲಖನಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ವಿಜಯೋತ್ಸವ ಅದ್ದೂರಿಯಿಂದ ಆಚರಿಸಿದರು.
ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಅವರ ಕಾರ್ಯಾಲಯ ಹಾಗೂ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ನಂತರ ಲಖನ್ ಜಾರಕಿಹೊಳಿ ಅವರೊಂದಿಗೆ ಗುಲಾಲು ಎರಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ನಂತರ ಕಾರ್ಯಕರ್ತರನ್ನುದ್ಧೇಶಿಸಿ ಕಾಂಗ್ರೇಸ್ ಲಖನ್ ಜಾರಕಿಹೊಳಿ ಮಾತನಾಡಿ ಸತತ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಶ್ರಮಿಸಿದ ಗೋಕಾಕ ಕ್ಷೇತ್ರದ ಜನತೆ ನಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ತಮ್ಮ ಸೇವೆ ಮಾಡುತ್ತೆವೆ ಎಂದು ಹೇಳಿದರು.
ಗೋಕಾಕ ಮತಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದ್ದೆವೆ. ಇನ್ನೂ ಹಲವಾರು ಯೋಜನೆಗಳನ್ನು ಇಟ್ಟುಕೊಂಡಿದ್ದೆವೆ. ಕ್ಷೇತ್ರದ ಜನತೆ ಸಹಕರಿಸಬೇಕೆಂದರು.
ಸಹೋದರ ರಮೇಶ ಜಾರಕಿಹೊಳಿ ಅವರು ಸಂಪುಟ ದರ್ಜೆಯ ಸಚಿವರಾಗಿರುವದು ಕ್ಷೇತ್ರದ ಜನತೆಯೇ ಸಚಿವರಾದಂತೆ. ನಮ್ಮ ಮೇಲೆ ಸಾಕಷ್ಟು ಪ್ರೀತಿ ತೋರಿದ ಜಿಲ್ಲೆಯ ಹಾಗೂ ತಾಲೂಕಿನ ಜನತೆಗೆ ನಾವು ಆಭಾರಿಯಾಗಿದ್ದೆವೆ ಎಂದರು.
ವಿಜಯೋತ್ಸವ ಸಂದರ್ಭದಲ್ಲಿ ನಗರಸಭೆ ಸದಸ್ಯ ಭೀಮಶಿ ಭರಮನ್ನವರ, ಜಯಾನಂದ ಹುಣಶ್ಯಾಳಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶ್ರೀ ಲಖನಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದ ಅಶೋಕ ಸಾಯನ್ನವರ, ಶೇಖರ ಉಳಾಗಡ್ಡಿ, ಕಾಶೀಮ ಮುಜಾವರ, ವಿಶ್ವನಾಥ ಗಾಣಿಗೇರ, ಅನೀಲ ಮುರಾರಿ, ವಿಜಯ ಅರಭಾಂವಿ, ಆನಂದ ಮಗದುಮ್, ಅರವಿಂದ ಜೋರಾಪೂರ, ಅಡಿವೇಶ ಮಜ್ಜಗಿ, ಮುತ್ತುರಾಜ ಜಮಖಂಡಿ, ಪವನ ಮಹಾಲಿಂಗಪೂರ, ಸತೀಶ ಮನ್ನಿಕೇರಿ, ಅರುಣ ಗೋಣಿ, ಕಿರಣ ಗೋಣಿ, ಸಚೀನ ಕಮಟೇಕರ, ಕಂಬಾರ ಸೇರಿದಂತೆ ಅಭಿಮಾನಿಗಳು ಇದ್ದರು.