ಗೋಕಾಕ:ಸಿ.ಪುಟ್ಟರಂಗಶಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ

ಸಿ.ಪುಟ್ಟರಂಗಶಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ
ಗೋಕಾಕ ಮೇ 23 : ಕಾಂಗ್ರೇಸ ಜೆಡಿಎಸ್ ಸಮಿಶ್ರ ಸರಕಾರದಲ್ಲಿ ಚಾಮರಾಜನಗರದ ವಿಧಾನ ಸಭಾ ಮತ ಕ್ಷೇತ್ರದಿಂದ ಕಾಂಗ್ರೇಸ ಪಕ್ಷದಿಂದ ಸತತ ಮೂರನೇಯ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ.ಪುಟ್ಟರಂಗಶಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೆಕೆಂದು ಅರಭಾಂವಿ ಉಪ್ಪಾರ ಸಮಾಜದ ಅಧ್ಯಕ್ಷ ಮಂಜುನಾಥ ಕಲ್ಲಪ್ಪ ಜಲ್ಲಿ ಅಗ್ರಹಿಸಿದ್ದಾರೆ
ಬುಧುವಾರ ಅರಭಾಂವಿ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು 35 ರಿಂದ 40 ಲಕ್ಷದ ವರೆಗೆ ಉಪ್ಪಾರ ಸಮಾಜದ ಸಂಖ್ಯೆ ಇದ್ದು , ಚಾಮರಾಜನಗರದಿಂದ ಆಯ್ಕೆಯಾದ ಸಿ ಪುಟ್ಟರಂಗಶಟ್ಟಿ ಅವರು ನಮ್ಮ ಸಮಾಜದ ಏಕೈಕ ಶಾಸಕರಾಗಿದ್ದಾರೆ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿಸುವ ಮೂಲಕ ಉಪ್ಪಾರ ಸಮಾಜಕ್ಕೆ ನ್ಯಾಯ ಒದಗಿಸಕೊಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಅಡಿವೆಪ್ಪಾ ಬಿಲಕುಂದಿ, ಕುಮಾರ ತಿಗಡಿ, ಯಲ್ಲಪ್ಪ ವಾಲಿಕರ, ಪ್ರದೀಪ ಲಖನ್ನವರ, ರಾಘವೇಂದ್ರ ಜಲ್ಲಿ, ಭೀಮಶಿ ಉಪ್ಪಾರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು