RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯ ನೀಡಿ ಐತಿಹಾಸಿಕ ದಿಗ್ವಿಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ್ರ

ಗೋಕಾಕ:ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯ ನೀಡಿ ಐತಿಹಾಸಿಕ ದಿಗ್ವಿಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ್ರ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಗೃಹ ಕಛೇರಿ ಆವರಣದಲ್ಲಿ ಕೌಜಲಗಿ ಪಟ್ಟಣದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯ ನೀಡಿ ಐತಿಹಾಸಿಕ ದಿಗ್ವಿಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ್ರ

ಗೋಕಾಕ ಮೇ 2 : ಸರ್ವ ಸಮಾಜಗಳ ಹಿತಕ್ಕನುಗುಣವಾಗಿ ಕಳೆದ ಎರಡು ದಶಕಗಳಿಂದ ಶ್ರಮಿಸುತ್ತಿರುವ ನನಗೆ ಮೇ 12 ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯ ನೀಡಿ ಐತಿಹಾಸಿಕ ದಿಗ್ವಿಜಯಕ್ಕೆ ಶ್ರಮಿಸುವಂತೆ ಶಾಸಕ ಹಾಗೂ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದರು.
ಇಂದಿಲ್ಲಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ನಡೆದ ಕೌಜಲಗಿ ಪಟ್ಟಣದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಕೂಡಿಕೊಂಡು ಒಗ್ಗಟ್ಟಿನಿಂದ ಈ ಚುನಾವಣೆಯಲ್ಲಿ ದುಡಿಯುವಂತೆ ಮನವಿ ಮಾಡಿಕೊಂಡರು.
ಕೌಜಲಗಿ ಪಟ್ಟಣಕ್ಕೆ ಸರ್ಕಾರದ ಸಾಕಷ್ಟು ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದ್ದೇನೆ. ಅದರಲ್ಲಿ 2.02 ಕೋಟಿ ರೂ. ವೆಚ್ಚದ ಸುವರ್ಣ ಗ್ರಾಮೋದಯ, 20 ಲಕ್ಷ ರೂ. ವೆಚ್ಚದ ಕನಕ ಭವನ, 1.50 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನಗಳು, 2 ಕೋಟಿ ರೂ. ವೆಚ್ಚದಲ್ಲಿ ಪದವಿ ಪೂರ್ವ ಮಹಾವಿದ್ಯಾಲಯದ ಕಟ್ಟಡ, 3.80 ಕೋಟಿ ರೂ. ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ, 3 ಕೋಟಿ ರೂ. ವೆಚ್ಚದ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಕಾಮಗಾರಿಗಳು, ರಸ್ತೆಗಳ ಸುಧಾರಣೆ, ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ. ಎಲ್ಲ ಇಲಾಖೆಗಳ ಅಡಿಯಲ್ಲಿ ಕೋಟ್ಯಾಂತರ ರೂ. ಮೊತ್ತದಲ್ಲಿ ಕೌಜಲಗಿ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗಿದೆ. ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿರುವುದರಿಂದ ನ್ಯಾಯಯುತವಾಗಿ ನಿಮ್ಮಲ್ಲಿ ಮತ ಕೇಳುತ್ತಿದ್ದೇನೆ. ಅರಭಾವಿ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಮತ ನೀಡಿ ಆರಿಸಿಕಳುಹಿಸುವಂತೆ ಕೋರಿದರು.
ಈ ಚುನಾವಣೆಯಲ್ಲಿ ಕಾಂಗ್ರೇಸ್-ಜೆಡಿಎಸ್ ಅಭ್ಯರ್ಥಿಗಳು ಜನರಿಗೆ ಸುಳ್ಳು ಹೇಳುತ್ತಾ ಪ್ರಚಾರ ಮಾಡುತ್ತಿದ್ದಾರೆ. ಅವರಿಂದ ಏನೂ ನಿರೀಕ್ಷಿಸಬೇಡಿ ಎಂದು ಹೇಳಿದರು.
ಕಾಂಗ್ರೇಸ್-ಜೆಡಿಎಸ್‍ಗೆ ಒಂದೂ ಮತ ಹಾಕಬೇಡಿ: ಮೂಲತಃ ಕೌಜಲಗಿಯವರಾದ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ದಳವಾಯಿ ಅವರಿಂದ ನಮ್ಮ ಪಟ್ಟಣಕ್ಕೆ ಯಾವ ಉಪಕಾರವೂ ಆಗಿಲ್ಲ. ಸ್ವಾಭಿಮಾನಿ ಹಾಗೂ ಅಭಿವೃದ್ಧಿ ಹರಿಕಾರರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೌಜಲಗಿಯ ಎಲ್ಲ ಮತಗಳು ಬೀಳುವಂತೆ ನೋಡಿಕೊಳ್ಳಬೇಕೆಂದು ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಮಹಾದೇವಪ್ಪ ಭೋವಿ ಹೇಳಿದರು.
ಕೌಜಲಗಿ ತಾಲೂಕು ಮಾಡುತ್ತೇನೆಂದು ಜಂಭಕೊಚ್ಚಿಕೊಳ್ಳುತ್ತಿರುವ ಭೀಮಪ್ಪ ಗಡಾದ ಮಾತಿಗೂ ಮರುಳಾಗಬೇಡಿ. ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಮೂಡಲಗಿ ತಾಲೂಕು ಆಗಿದಿಯೇ ಹೊರತು ಬೇರೆಯವರಿಂದಲ್ಲ. ಕೆಲವರಿಂದ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮಸಿ ಬಳಿಯಬೇಕಾದರೆ ಮೊದಲು ತಮ್ಮ ಕೈಗಳಿಗೆ ಮಸಿ ಹತ್ತಿರುತ್ತದೆ ಎಂಬುದನ್ನು ವಿರೋಧಿಗಳು ಅರ್ಥಮಾಡಿಕೊಳ್ಳಬೇಕು. 9000ಕ್ಕೂ ಅಧಿಕ ಮತಗಳು ಕೌಜಲಗಿಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅತ್ಯಧಿಕ ಮತಗಳು ಲಭಿಸುವಂತೆ ಎಲ್ಲ ಸಮುದಾಯಗಳ ಕಾರ್ಯಕರ್ತರು ದುಡಿಯುವಂತೆ ಕೋರಿದರು.
ಅರವಿಂದ ದಳವಾಯಿ ಅವರ ಕಾಂಗ್ರೇಸ್ ಡಬ್ಬಿಯನ್ನು ಖಾಲಿ ಕಳುಹಿಸುತ್ತೇವೆ. ಎಲ್ಲ ಸಮಾಜಗಳ ಮುಖಂಡರುಗಳು ಬಿಜೆಪಿ ಅಭ್ಯರ್ಥಿ ಪರ ಒಗ್ಗಟ್ಟಿನಿಂದ ದುಡಿಯುತ್ತೇವೆ. ಕೌಜಲಗಿಯವರಾದರೂ ಅವರಿಗೆ ಒಂದೂ ಮತ ಬೀಳದಂತೆ ನೋಡಿಕೊಳ್ಳುತ್ತೇವೆ. ನಮಗೆ ಕೌಜಲಗಿ ವಿಕಾಸವೇ ಮುಖ್ಯ. ಇದಕ್ಕಾಗಿ ಎಲ್ಲರೂ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತೇವೆಂದು ಆಯಾ ಸಮಾಜಗಳ ಮುಖಂಡರು ಇದೇ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು.
ಮುಖಂಡರಾದ ಅಶೋಕ ಪರುಶೆಟ್ಟಿ, ಅಶೋಕ ಉದ್ದಪ್ಪನವರ, ಎಸ್.ಆರ್. ಭೋವಿ, ಶಿವಾನಂದ ಲೋಕನ್ನವರ, ಪರಮೇಶ್ವರ ಹೊಸಮನಿ, ನೀಲಪ್ಪ ಕೇವಟಿ, ಅಡಿವೆಪ್ಪ ದಳವಾಯಿ, ನಾರಾಯಣ ಅರಮನಿ, ಸುಭಾಸ ಕೌಜಲಗಿ, ಶಾಂತಪ್ಪ ಹಿರೇಮೇತ್ರಿ, ರಾಯಪ್ಪ ಬಳೋಲದಾರ, ರವಿ ಶಹಾ, ಬಿ.ಎ. ಲೋಕನ್ನವರ, ಬಸಪ್ಪ ಕುಂದರಗಿ, ಅಶೋಕ ಹೊಸಮನಿ, ಜಕೀರ ಜಮಾದಾರ, ಶ್ರೀಶೈಲ ಗಾಣಿಗೇರ, ಎಂ.ಡಿ. ಖಾಜಿ, ಡಿ.ಜೆ. ಮುಲ್ತಾನಿ, ರಮ್ಜಾನ್ ಪೋದಿ, ನಾರಾಯಣ ಕೌಜಲಗಿ, ಎಸ್.ಬಿ. ಹಳ್ಳೂರ, ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.

Related posts: