RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಶಕ್ತಿ ಪ್ರರ್ದಶನದ ಮೂಲಕ ಇಂದು ಮತ್ತೋಮ್ಮೆ ನಾಮಪತ್ರ ಸಲ್ಲಿಸಿದ ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಶಕ್ತಿ ಪ್ರರ್ದಶನದ ಮೂಲಕ ಇಂದು ಮತ್ತೋಮ್ಮೆ ನಾಮಪತ್ರ ಸಲ್ಲಿಸಿದ ಸಚಿವ ರಮೇಶ ಜಾರಕಿಹೊಳಿ 

ನಾಮಪತ್ರ ಸಲ್ಲಿಸುತ್ತಿರುವ ಸಚಿವ ರಮೇಶ ಜಾರಕಿಹೊಳಿ

ಶಕ್ತಿ ಪ್ರರ್ದಶನದ ಮೂಲಕ ಇಂದು ಮತ್ತೋಮ್ಮೆ ನಾಮಪತ್ರ ಸಲ್ಲಿಸಿದ ಸಚಿವ ರಮೇಶ ಜಾರಕಿಹೊಳಿ
ಗೋಕಾಕ ಏ 23 : ಕಳೆದ ಶುಕ್ರವಾರವಷ್ಷೇ ಶುಭ ಘಳಿಗೆ ನೋಡಿ ನಾಮಪತ್ರ ಸಲ್ಲಿಸಿದ ಸಚಿವ ರಮೇಶ ಜಾರಕಿಹೊಳಿ ಅವರು ಸೋಮವಾರದಂದು ಮತ್ತೋಮ್ಮೆ ತಮ್ಮ ಅಫಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬೃಹತ್ ಪ್ರಮಾಣದ ಮೆರವಣಿಗೆ ನಡೆಯಿಸಿ ನಗರದಲ್ಲಿ ಶಕ್ತಿ ಪ್ರರ್ದಶನ ನಡೆಯಿಸಿ ನಾಮಪತ್ರ ಸಲ್ಲಿಸಿದರು .
ನಗರದ ಹನುಮಂತ ದೇವರ ಗುಡಿಯಿಂದ ಮೆರವಣಿಗೆ ನಡೆಯಿಸಿದ ಸಚಿವರು ಸಂಗೋಳ್ಳಿ ರಾಯಣ್ಣ ವೃತ್ತ , ಬಸವೇಶ್ವರ ವೃತ್ತದ ಮಾರ್ಗವಾಗಿ ಮಿನಿ ವಿಧಾನಸೌದ ಕ್ಕೆ ಆಗಮಿಸಿ ಚುನಾವಣಾಧಿಕಾರಿ ದಿನೇಶಕುಮಾರ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು .

ನಾಮಪತ್ರ ಸಲ್ಲಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಈ ಬಾರಿ ಕಾಂಗ್ರೆಸ್ ಗಾಳಿ ಇದ್ದು ಮತ್ತೋಮ್ಮೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಲ್ಲಿದು , ನಾನು ಕೂಡಾ ಈ ಬಾರಿ ಸೂಮಾರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಸಾಧಿಸತ್ತೇನೆಂದ ಸಚಿವರು ಸಿದ್ದರಾಮಯ್ಯ ಅವರಂತ ನಾಯಕರು ಮತ್ತೋಮ್ಮೆ ಸಿಎಂ ಮಾಡಲು ಬಾದಾಮಿ ಕ್ಷೇತ್ರದ ಬದಲು ನಾನು ನನ್ನ ಕ್ಷೇತ್ರ ಬಿಟ್ಟು ಕೊಡಲು ಸಿದ್ಧ ಈ ಸಂಬಂಧ ಅವರೊಂದಿಗೆ ಚರ್ಚಿಸಲಾಗಿದೆ . ಬಿಜೆಪಿಯಲ್ಲಿ ಹೀಟ್ಲರಶಾಹಿ ಪದ್ದತಿ ಇದ್ದು ಅದನ್ನು ಜನ ಗುಜರಾತದಲ್ಲಿ ಅವರಿಗೆ ಮತದಾನದ ಶೇಕಡಾ ವಾರು ಕಡಿಮೆ ಮಾಡುವ ಮುಖಾಂತರ ಜನಶಕ್ತಿ ತೋರಿಸಿದ್ದಾರೆ . ಕರ್ನಾಟಕದಲ್ಲಿ ಮತ್ತೋಮ್ಮೆ ಸರಕಾರ ರಚಿಸುವ ಮೂಲಕ ಅವರ ಹೀಟ್ಲರ ಪದ್ದತಿಗೆ ಕಡಿವಾಣ ಹಾಕಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದ್ದರು .

ಜಿಲ್ಲೆಯಲ್ಲಿಯೂ ಸಹ ಎಲ್ಲಾ ಬಿನ್ನಾಬಿಪ್ರಾಯವನ್ನು ಶಮನಗೋಳಿಸಲಾಗಿದ್ದು , ಸಣ್ಣ ಪುಟ್ಟ ವಿಷಯಗಳನ್ನು ಆತಂರಿವಾಗಿ ಬಗೆಹರಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಜಿಲ್ಲೆಯಲ್ಲಿ ಸೂಮಾರು 12 ಕ್ಷೇತ್ರದಲ್ಲಿ ಕಾಂಗ್ರೇಸ ಪಕ್ಷ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು

ಈ ಸಂದರ್ಭದಲ್ಲಿ ಕಾಂಗ್ರೇಸ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ , ನಜೀರ ಶೇಖ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: