ಬೆಳಗಾವಿ:ಟಿಕೆಟ್ ಕೊಡಿಸುವಲ್ಲಿ ಜೆ ಕಂಪನಿ ಯಶಸ್ಸು : ನಾಟ್ ರಿಚೇಬಲ್ ಆಗಲಿದೆಯೇ ಟಾರ್ಗೆಟ್ 10 ಟೂ 12

ಟಿಕೆಟ್ ಕೊಡಿಸುವಲ್ಲಿ ಜೆ ಕಂಪನಿ ಯಶಸ್ಸು : ನಾಟ್ ರಿಚೇಬಲ್ ಆಗಲಿದೆಯೇ ಟಾರ್ಗೆಟ್ 10 ಟೂ 12
ಬೆಳಗಾವಿ ಏ 16 : ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಕೈ ಟಿಕೆಟ್ ಪೈನಲ್ ಪಟ್ಟಿ ಹೊರ ಬಿದ್ದಿದೆ
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ತಮ್ಮ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ . ಆದರೆ ಕೆಲವು ಕ್ಷೇತ್ರಗಳಲ್ಲಿ ಗೆಲುವು ಮಾನದಂಡವನ್ನು ಬದಿಗೋತ್ತಿ ಟಿಕೆಟ್ ಕೊಡಿಸಲಾಗಿದೆ ಎಂಬ ವಿಷಯ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ
ಕುಡಚಿ, ನಿಪ್ಪಾಣಿ, ಖಾನಾಪುರ, ಸವದತ್ತಿ , ಅಥಣಿ , ಕಾಗವಾಡ , ಬೈಲಹೊಂಗಲ , ಬೆಳಗಾವಿ ದಕ್ಷಿಣ ಕ್ಷೇತ್ರಗಳಲ್ಲಿ ಜಾರಕಿಹೊಳಿ ಸಹೋದರರು ಗೆಲ್ಲುವ ಮಾನದಂಡ ಅನುಸರಿಸುವಲ್ಲಿ ವಿಫಲವಾಗಿ ಕೆಲವು ಒತ್ತಡ ಮತ್ತು ಮೂಲಾಜಿಗೆ ಒಳಗಾಗಿ ಟಿಕೆಟ್ ಕೊಡಿಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ .
ಒಟ್ಟಾರೆಯಾಗಿ ಪಕ್ಷದ ವರಿಷ್ಠರಿಗೆ ಜಾರಕಿಹೊಳಿ ಸಹೋದರರು 10 ರಿಂದ 12 ಕ್ಷೇತ್ರಗಳಲ್ಲಿ ಗೆದ್ದೆ ಗೆಲುತ್ತೇವೆ ಎಂದು ಆಶ್ವಾಸನೆ ನೀಡಿ ತಾವು ಹೇಳಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಬೇಕೆಂಬ ಬೇಡಿಕೆಯೊಂದಿಗೆ ಟಿಕೆಟ್ ಪಡೆದುಕೊಂಡು ಬಂದಿದ್ದಾರೆ ವರಿಷ್ಠರಿಗೆ ಕೊಟ್ಟ ಮಾತನ್ನು ಉಳಿಸಿಕೋಳ್ಳಲು ಸಹೋದರರು ಯಾವ ತಂತ್ರವನ್ನು ಆನುಸರಿಸುತ್ತಾರೆ ಎಂಬ ಯಕ್ಷ ಪ್ರಶ್ನೆಯ ಉತ್ತರಕ್ಕೆ ಮೇ 15 ವರೆಗೆ ಕಾಯಬೇಕಷ್ಠೇ ..