ಗೋಕಾಕ:ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ
ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ
ಗೋಕಾಕ ಜ 22: ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ ಎಂದು ನಗರದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ಸೋಮವಾರದಂದು ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಲಯನ್ಸ್ ಸಂಸ್ಥೆಯವರು 100ನೇ ವಾರದ ಅನ್ನದಾಸೋಹ ನಿಮಿತ್ಯ ಹಮ್ಮಿಕೊಂಡ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಮಾನವನ ಬದುಕು ಹಸನಾಗಲು ಪರಪೋಕಾರ ಮಾಡಬೇಕು. ಸಮಾಜದಲ್ಲಿ ಬಿದ್ದವರನ್ನು ಮೇಲೆತ್ತಿ ದು:ಖದಲ್ಲಿರುವವರ ಕಣ್ಣಿರುವರೆಸುವವರು ದೊಡ್ಡವರಾಗುತ್ತಾರೆ. ಅಂತಹ ಕಾರ್ಯ ಮಾಡುತ್ತಿರುವ ಲಯನ್ಸ್ ಸಂಸ್ಥೆಯವರ ಕಾರ್ಯ ಮಾದರಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅನ್ನದಾಸೋಹಕ್ಕೆ ಚಾಲನೆ ನೀಡಿದ ಜಿಲ್ಲಾ ಪ್ರಾಂತಪಾಲ ಶೈಶ್ ಲಾವಂಡೆ ಮಾತನಾಡುತ್ತಾ ನೇತ್ರದಾನ, ದೇಹದಾನ ಹಾಗೂ ಅನ್ನದಾನದಂತಹ ಸಮಾಜಮುಖಿ ಕಾರ್ಯ ಮಾಡುತ್ತಿರುವ ಇಲ್ಲಿಯ ಲಯನ್ಸ್ ಸಂಸ್ಥೆಯವರ ಕಾರ್ಯ ಶ್ಲಾಘನೀಯವೆಂದರು.
ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿಜಯ ಬಾಫನಾ, ಕಾರ್ಯದರ್ಶಿ ವಿಶ್ವನಾಥ ಬೆಲ್ಲದ, ಖಜಾಂಚಿ ನರೇಂದ್ರ ಪರಮಾರ, ಅನ್ನದಾಸೊಹದ ಮುಖ್ಯಸ್ಥರಾದ ವಿ.ಜಿ.ಸಿದ್ಧಾಪೂರಮಠ. ಪಿ.ಸಿ.ಬಾಫನಾ, ಜಿ.ಎಸ್.ಸಿದ್ಧಾಪೂರಮಠ, ಲಯನೆಸ್ಸ ಸಂಸ್ಥೆಯ ಅಧ್ಯಕ್ಷೆ ಜಯಾ ಬಾಫನಾ, ಕಾರ್ಯದರ್ಶಿ ದೀಪಾ ಬೆಲ್ಲದ ಹಾಗೂ ಡಾ| ಗೋಪಾಲ ವಾಘಮೋಡೆ, ಉಪ ಅರಣ್ಯ ಸಂರಕ್ಷಣಾಧಿಖಾರಿ ಡಿ.ದೇವರಾಜ್, ರಜನೀ ಜೀರಗ್ಯಾಳ, ವೈಶಾಲಿ ಭರಭರಿ, ಎಸ್.ಕೆ.ಮಠದ, ಡಾ| ಅಶೋಕ ಪಾಟೀಲ, ಪ್ರಕಾಶ ಹೆಗ್ಗಣ್ಣವರ ಸೇರಿದಂತೆ ಇತರರು ಇದ್ದರು.