ಗೋಕಾಕ:ಈಡಿಗ ಸಮಾಜದ ನಿಂದನೆ : ವೆಂಕಟೇಶ ಇಳಿಗೇರ ಖಂಡನೆ

ಈಡಿಗ ಸಮಾಜದ ನಿಂದನೆ : ವೆಂಕಟೇಶ ಇಳಿಗೇರ ಖಂಡನೆ
ಗೋಕಾಕ ಎ 6 : ಅಪಜಲಪುರ ಮಾಜಿ ಶಾಸಕ ಎಂ.ವೈ.ಪಾಟೀಲ ಅವರ ಪುತ್ರ ಅರುಣಕುಮಾರ ಪಾಟೀಲ, ಈಳಿಗ್ಯಾ ಎನ್ನುವ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೆ. ಕಡಿಯಿರಿ, ಹೊಡೆಯಿರಿ ಎನ್ನುವ ಉದ್ದಟನತನದ ಭಾಷಣದಲ್ಲಿ ಹೇಳಿಕೆಯನ್ನು ಬೆಳಗಾವಿ ಆರ್ಯ ಈಡಿಗ ಸಮಾಜ ಯುವ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ ಇಳಿಗೇರ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಕಳೆದ 30-40 ವರ್ಷಗಳ ರಾಜಕಾರಣದಲ್ಲಿ ಶಾಸಕ ಮಾಲಿಕಯ್ಯ ಗುತ್ತೇದಾರ ಅವರನ್ನು ಜಾತಿ ಹೆಸರಿನಲ್ಲಿ ಕೆಣಕಿದ್ದಿಲ್ಲ. ಅಲ್ಲದೇ ಏಕ ವಚನದಲ್ಲಿ ಬೈದು ಹಾದಿಯಲ್ಲಿ ಸಿಕ್ಕಾಗ ಕೋಣ ಕಡಿದಂತೆ ಕಡಿಯಬೇಕು ಎಂದು ಹೇಳಿರುವುದು ಸಮಾಜ ಬಾಂಧವರಲ್ಲಿ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಲೇ ಗಡಿಪಾರು ಮಾಡಿ ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಜಿ.ಪಂ ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿದ್ದಾರೆ. ಒಂದು ವೇಳೆ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.