ಬೆಳಗಾವಿ:ನಾಡ ವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದು: ಪಾಲಿಕೆ ಸದ್ಯಸರಿಗೆ ಸಚಿವ ಬೇಗ್ ಎಚ್ಚರಿಕೆ
ನಾಡ ವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದು: ಪಾಲಿಕೆ ಸದ್ಯಸರಿಗೆ ಸಚಿವ ಬೇಗ್ ಎಚ್ಚರಿಕೆ
ಬೆಳಗಾವಿ ಮೇ 22: ಬೆಳಗಾವಿ ಮಹಾನಗರ ಪಾಲಿಕೆಯ ಎಂಇಎಸ ಸದ್ಯಸರ ಪುಂಡಾಟಿಕೆ ಇನ್ನು ಮುಂದೆ ಬ್ರೇಕ್ ಬಿಳಲಿದೆ ಎಂದು ಗುಡಿಗಿರುವ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಈ ಕುರಿತು ನಾಳೆ ಪಾಲಿಕೆಗೆ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದ್ದಾರೆ
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇನ್ನು ಮುಂದೆ ಪಾಲಿಕೆ ಸದಸ್ಯರು ನಾಡ ವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದಾಗಲಿದೆ ಎಂದು ಎಚ್ಚರಿಸಿದ್ದಾರೆ ಅಲ್ಲದೇ ನಾಡ ವಿರೋಧಿ ಚಟುವಟಿಕೆ ನಡೆಸದಂತೆ ಹೊಸ ಕಾಯ್ದೆ ತರುವುದಾಗಿಯೂ ಹೇಳಿದ್ರು.
ಬಿಜೆಪಿ ವಿರುದ್ಧ ಕಿಡಿ :
ದಲಿತರ ಮನೆಯಲ್ಲಿ ಊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ರೋಷನ್ ಬೇಗ್ ಅವರು ಯಡಿಯೂರಪ್ಪ ದಲಿತರ ಮನೆಗೆ ಹೋಗಿ ಹೋಟೆಲ್ ಇಡ್ಲಿ ತಿನ್ನವುದು ಅಂದರೆ ನಗುಬರುತ್ತದೆ. ಸುಮ್ಮನೆ ಬಿಎಸ್ವೈ ದಲಿತರ ಮನೆಗೆ ಹೋಗಿ ಶೋ ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಇನ್ನು ಈಶ್ವರಪ್ಪ-ಯಡಿಯೂರಪ್ಪ ನಡುವಿನ ಕಚ್ಚಾಟ ಮರೆಸಲು ಮಳೆಗಾಲದಲ್ಲಿ ಬರದ ಪ್ರವಾಸ ಆರಂಭಿಸಿದ್ದಾರೆಂದು ಸಚಿವ ಬೇಗ್ ಕಿಡಿಕಾರಿದ್ರು.