ಬೆಳಗಾವಿ:ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ
ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ
ಬೆಳಗಾವಿ ಫೆ 17: ವಿಧಾನಸಭಾ ಚುನಾವಣೆ ಸಮಿಪಿಸುತ್ತದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪೊಲೀಸ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ
ನಗರದ ಸರ್ಕಿಟ್ ಹೌಸನಲ್ಲಿಂದು ಉತ್ತರ ವಲಯದ ಐಜಿಪಿ ಅಲೋಕ ಕುಮಾರ ನೇತೃತ್ವದಲ್ಲಿ ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳ ಮತ್ತು ಬೆಳಗಾವಿ ವಲಯದ ಪೊಲೀಸ ಅಧಿಕಾರಿಗಳ ಸಭೆ ನಡೆಯಿತು
ಚುನಾವಣಾ ಅಕ್ರಮಗಳನ್ನು ಹತ್ತಿಕ್ಕುವ ಮತ್ತು ಗಡಿ ಭಾಗದಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಗೋವಾ ಮತ್ತು ಮಹಾರಾಷ್ಟ್ರ ಪೋಲೀಸರ ಸಹಕಾರ ಅಗತ್ಯವಾಗಿದ್ದು ಇವುಗಳನ್ನು ತಡೆಯುವ ನೀಟ್ಟಿನಲ್ಲಿ ಈ ಸಭೆಯಲ್ಲಿ ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು
ಈ ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯದ ಕೋಲಾಪೂರ ಐಜಿಪಿ ವಿಶ್ವಾಸ ನಾಂಗರೆ ಪಾಟೀಲ , ಗೋವಾ ಉತ್ತರ ಜಿಲ್ಲೆಯ ಎಸ್ಪಿ ಚಂದನ ಚೌದ್ರಿ , ವಿಜಯಪುರ ಎಸ್ಪಿ ರೀಶತ್ ಸಿಂಗ್ , ಬಾಗಲಕೋಟೆ ಎಸ್ಪಿ ಸಂತೋಷ ಬಾಬು ಬೆಳಗಾವಿ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಮಹಾನಿಂಗ ನಂದಗಾಂವಿ ಸೇರಿದಂತೆ ಬೆಳಗಾವಿ ವಿಭಾಗದ ಉನ್ನತ ಪೊಲೀಸ ಅಧಿಕಾರಿಗಳು ಭಾಗವಹಿಸಿದ್ದರು