RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ನರ್ಮದಾ ಬಚಾವೋ ಆಂದೋಲನ ರೂವಾರಿ ಮೇದಾ ಪಾಟಕರ ಅವರಿಗೆ ಶ್ರೀ ಮಠದಿಂದ ಕಾಯಕಶ್ರೀ ಪ್ರಶಸ್ತಿ ಪ್ರಧಾನ : ಮುರುಘರಾಜೇಂದ್ರ ಶ್ರೀ

ಗೋಕಾಕ:ನರ್ಮದಾ ಬಚಾವೋ ಆಂದೋಲನ ರೂವಾರಿ ಮೇದಾ ಪಾಟಕರ ಅವರಿಗೆ ಶ್ರೀ ಮಠದಿಂದ ಕಾಯಕಶ್ರೀ ಪ್ರಶಸ್ತಿ ಪ್ರಧಾನ : ಮುರುಘರಾಜೇಂದ್ರ ಶ್ರೀ 

ನರ್ಮದಾ ಬಚಾವೋ ಆಂದೋಲನ ರೂವಾರಿ ಮೇದಾ ಪಾಟಕರ ಅವರಿಗೆ ಶ್ರೀ ಮಠದಿಂದ ಕಾಯಕಶ್ರೀ ಪ್ರಶಸ್ತಿ ಪ್ರಧಾನ : ಮುರುಘರಾಜೇಂದ್ರ ಶ್ರೀ

ಗೋಕಾಕ ಜ 29: ನಗರದ ವಾಲ್ಮೀಕಿ ವೃತ್ತದಲ್ಲಿರುವ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಬಿಸಿಎ ಮಹಾವಿದ್ಯಾಲಯ ಆವರಣದಲ್ಲಿ ಫೆ.1 ರಿಂದ 4 ರವರೆಗೆ 4 ದಿನಗಳ ಕಾಲ ಕಾಯಕಯೋಗಿ ಶ್ರೀ ಮ.ನಿ.ಪ್ರ .ಲಿಂಗೈಕ ಬಸವ ಮಹಾಸ್ವಾಮಿಗಳ ಹದಿಮೂರನೆಯ ಪುಣ್ಯಸ್ಮರಣೋತ್ಸವ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳು ” ಕಾಯಕಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿವೆ ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು

ನಗರದ ಶೂನ್ಯಸಂಪಾದನಾ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿನಾಂಕ 1 ರಂದು ಸಾಯಂಕಾಲ 6 ಘಂಟೆಗೆ ಭಾವೈಕ್ಯತೆ ಗೋಷ್ಠಿ ನಡೆಯಲ್ಲಿದ್ದು ದಿವ್ಯಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಡಾ. ಷಡಕ್ಷರಿಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು , ಶ್ರೀ ಮ.ನಿ.ಪ್ರ ಪ್ರಭುಚೆನ್ನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು , ಬೆಂಗಳೂರಿನ ಹಜರತ ಮೌಲಾನ ಪಿ.ಎಮ . ಮುಜಮ್ಮಿಲ್ ಸಾಬ್ ಉಪಸ್ಥಿತರಿರುವರು , ಕಾರ್ಯಕ್ರಮವನ್ನು ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಅಬಕಾರಿ ಸಚಿವ ರಾಮಪ್ಪಾ ತಿಮ್ಮಾಪೂರ , ವಿವೇಕರಾವ ಪಾಟೀಲ , ಲಖನ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು .
ಫೆ 2.ರಂದು ಸಂಜೆ 6 ಘಂಟೆಗೆ ಮಹಿಳಾ ಗೋಷ್ಠಿ ಹಾಗೂ ಕಾಯಕಶ್ರೀ ಪ್ರಶಸ್ತಿ ಪ್ರಧಾನ ನಡೆಯುವುದು .
ನರ್ಮದಾ ಬಚಾವೋ ಆಂದೋಲನ ರೂವಾರಿ ಮೇದಾ ಪಾಟಕರ ಅವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು . ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮೈಸೂರಿನ ಪರಮ ಪೂಜ್ಯ ಶ್ರೀ ಜ್ಞಾನಪ್ರಕಾಶ ಮಹಾಸ್ವಾಮಿಗಳು ಮತ್ತು ಸವದತ್ತಿಯ ಪರಮ ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ವಹಿಸುವರು . ಅಧ್ಯಕ್ಷತೆಯನ್ನು ಶ್ರೀಮತಿ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ವಹಿಸುವರು .
ಫೆ .3 ರಂದು ಸಂಜೆ 6 ಘಂಟೆಗೆ ಸೈನಿಕ ಗೋಷ್ಠಿ ಮತ್ತು ವೀರ ಮರಣ ಹೊಂದಿದ ಯೋಧರ ತಾಯಿಗಳಿಗೆ ತುಲಾಭಾರ ಕಾರ್ಯಕ್ರಮ ಜರುಗುವುದು. ಮುಂಡರಗಿ-ಬೈಲೂರಿನ ಪರಮ ಪೂಜ್ಯ ಶ್ರೀ ನಿಜಗುಣಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು . ರಾಜಸ್ಥಾನಿನ ಮೇಜರ ಪಾಂಡಪ್ಪಾ ಕಾರ್ಯಕ್ರಮ ಉದ್ಘಾಟಿಸುವರು .
ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ , ಉಮೇಶ ಕತ್ತಿ , ವಿಧಾನ ಪರಿಷತ್ ಸದಸ್ಯ ಮಹಾಂತೇಂಶ ಕವಟಗಿಮಠ ಸೇರಿದಂತೆ ಅನೇಕರು ಭಾಗವಹಿಸುವರು . ವೀರ ಮರಣ ಹೊಂದಿದ ಯೋಧರ ತಾಯಂದಿರುಗಳಾದ ಬೆಟದೂರ-ಧಾರವಾಡಿನ ಶ್ರೀಮತಿ ಬಸವ್ವಾ ರಾಮಪ್ಪಾ ಕೊಪ್ಪದ , ಖನಗಾಂವಿನ ಶ್ರೀಮತಿ ದುಂಡವ್ವಾ ಚೆನ್ನಪ್ಪಾ ಪಾಟೀಲ ಅವರಿಗೆ ಶ್ರೀ ಮಠದಿಂದ ತುಲಾಭಾರ ನೇರವೇರಿಸಲಾಗುವುದು..
ಫೆ. 4 ಕೊನೆಯ ದಿನ ಬೆಳ್ಳಿಗೆ ಕರ್ತೃ ಗದ್ದುಗೆ ಹಾಗೂ ಲಿಂಗೈಕ್ಯ ಶ್ರೀ ಬಸವಮಹಾಸ್ವಾಮಿಗಳ ಗದ್ದುಗೆಗಳಿಗೆ ಅಭೀಷೇಕ ಹಾಗೂ ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಾಚಾರ ದಿಕ್ಷೆ , ಸಹಸ್ರ ಸಹಸ್ರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗುವುದು .
ಸಾಯಂಕಾಲ 6 ಘಂಟೆಗೆ ಸಂಗೀತ ಗೋಷ್ಠಿ ನಡೆಯುವುದು .ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಗದಗ-ಮನಗುಳಿಯ ಪರಮ ಪೂಜ್ಯ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ವಹಿಸುವರು .
ನಗರದ ರಿಯಾಜ ಚೌಗಲಾ ಕಲಾ ತಂಡದಿಂದ ಸಂಗೀತ ಸಂಭ್ರಮ ಕಾರ್ಯಕ್ರಮ , ಝೀ ಟಿವಿ ಕಾಮಿಡಿ ಕಿಲಾಡಿಗಳಾದ ಪ್ರವೀಣ ಗಸ್ತಿ , ಸಂಜು ಮುರಗೋಡ ಅವರಿಂದ ಹಾಸ್ಯ ಹೊನಲು ಕಾರ್ಯಕ್ರಮ ಜರುಗುವುದು .
ನಾಲ್ಕು ದಿನಗಳ ಕಾಲ ನಡೆಯುವ ಶರಣ ಉತ್ಸವ ಕಾರ್ಯಕ್ರಮದಲ್ಲಿ ಸಮಾಜ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶರಣ ಶರಣೆಯರಿಗೆ ಶ್ರೀ ಮಠದಿಂದ ಗೌರವ ಸನ್ಮಾನ ಜರುಗುವುದು
ಗೋಕಾಕ ನಾಡಿನ ಸಮಸ್ತ ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಮುರುಘರಾಜೇಂದ್ರ ಶ್ರೀಗಳು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಈಟಿ , ವಿವೇಕ ಜತ್ತಿ ,ಅಡಿವೇಶ ಗವಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: