ಬೈಲಹೊಂಗಲ:ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ
ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ
ಬೈಲಹೊಂಗಲ ಜ 27:ಇಂದಿನ ವೈಜ್ಞಾನಿಕ ಯುಗದಲ್ಲಿ ನಮ್ಮ ಭಾರತ ದೇಶ, ಪ್ರಗತಿಯತ್ತ ಸಾಗಲು ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದುÀ್ಪ್ರತಿಯೊಬ್ಬರ ಕರ್ತವ್ಯವಾಗಿದೆ ಸರಕಾರವು ಕೂಡಾ ಹೆಚ್ಚಿನ ಒತ್ತು ನೀಡಬೇಕು ಎಂದು ಸಂಪಗಾವಿ ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ಗ್ರಾಮದ ಸಂಗೋಳ್ಳಿ ರಾಯಣ್ಣ ವೃತ್ತ, ಮಾದರಿ ಶಾಲೆ, ಡಿ.ಪಿ.ಇ.ಪಿ ಶಾಲೆಗಳಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪುಣ್ಯಸ್ಮರಣೋತ್ಸವದ ಹಾಗೂ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಧ್ವಜಾರೋಹಣ ನೇರವೇರಿಸಿ ಕೆಸರಕೊಪ್ಪ ಡಿ.ಪಿ.ಇ.ಪಿ ಶಾಲೆಗೆ ನೂತನವಾಗಿ ಸೆಲ್ಕೋ ಕಂಪನಿ ಮತ್ತು ಮೆಂಡಾ ಪೌಂಡೇಶನ್ಗಳ ಸಂಯುಕ್ತ ಆಶ್ರಯದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಬಾಳ ಸಂಗಾತಿ ಎಂಬ ತಾಂತ್ರಿಕ ಕಲಿಕಾ ಸಾದನ ಸಾಮಗ್ರಿಗಳ ಉದ್ಘಾಟಸಿ ಮಾತನಾಡಿದರು. ನಮ್ಮ ಸೂತ್ತಮೂತ್ತಲಿನ ಶಿಕ್ಷಣ, ಆರೋಗ್ಯ ಬಗ್ಗೆ ಪ್ರತಿಯೊಬ್ಬರು ಕಾಳಜಿವಹಿಸಬೇಕೆಂದರು. ಸರಕಾರೇತರ ಸಂಸ್ಥೆಗಳು ಶಿಕ್ಷಣಕ್ಕೆ ಒತ್ತು ಕೊಟ್ಟು ಶಾಲೆಗೆ ನೀಡುತ್ತಿರುವ ಕೊಡುಗೆ ಅಮೂಲ್ಯವಾದದ್ದು ಎಂದರು. ದೇಣಿಗೆ ನೀಡಿದ ಕೆ. ಎಸ್ ಪಾಟೀಲ ಮತ್ತು ಅದಕ್ಕಾಗಿ ಹಣಕಾಸಿನ ನೆರವು ನೀಡಿದ ಸಮಾಜ ಸೇವಕ ಕೃಷ್ಣಾಜಿ ಕುಲಕರ್ಣಿ ಅವರನ್ನು ಶಾಲೆಯಿಂದ ಸತ್ಕರಿಸಲಾಯಿತು. ಗ್ರಾ.ಪಂ ಅದ್ಯಕ್ಷೆ ಸುವರ್ಣಾ ಕಾರಿಮನಿ ಅಧ್ಯಕ್ಷತೆ ವಹಿಸಿದ್ದರು, ಉಪಾದ್ಯಕ್ಷ ಮಹಾದೇವಪ್ಪ ನರಸನ್ನವರ, ಕೃಷ್ಣಾಜಿ ಕುಲಕರ್ಣಿ, ಕೆ.ಎಸ್ ಪಾಟೀಲ, ಎಸ್.ಡಿ.ಎಮ್.ಸಿ ಅದ್ಯಕ್ಷ ಮಡಿವಾಳಪ್ಪ ಭಜೇರಿ, ಉಪಾದ್ಯಕ್ಷ ಸತ್ಯಪ್ಪ ತಳವಾರ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಶಾಲಾ ಎಸ್,ಡಿ.ಎಮ್.ಸಿ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬಸವರಾಜ ಬೆಳ್ಳಿಕಟ್ಟಿ ಸ್ವಾಗತಿಸಿದರು, ಮುಖ್ಯ ಅಧ್ಯಾಪಕ ಶಂಕರ ಘಂಟಿ ನಿರೂಪಿಸಿದರು, ಬಸವರಾಜ ತೋರಣಗಟ್ಟಿ ವಂದಿಸಿದರು,